ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಲಕ್ಷ ಲಕ್ಷ ರೂ. ಸಂಬಳದ ಆಸೆಗಾಗಿ ವಿದೇಶಕ್ಕೆ ತೆರಳಿ ಮೋಸ ಹೋದ ಯುವಕರು ಅನ್ನ ನೀರು ಸಿಗದೆ ಪರದಾಟ

ಬಸವಕಲ್ಯಾಣ: ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ಅನ್ನ ನೀರು ಸಿಗದೆ ಯುವಕರು ಪರದಾಡುತ್ತಿದ್ದಾರೆ. ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ ಪ್ರಸಂಗ ಗುರುವಾರ ಬೆಳಕಿಗೆ ಬಂದಿದೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕ ಹಾಗೂ ನೆರೆಯ ಕಲಬುರ್ಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ವಿದೇಶಕ್ಕೆ ಹೋದ ಯುವಕರು ಕಳೆದ ಒಂದು ವಾರದ ಹಿಂದೆ ಲಕ್ಷ ರೂಪಾಯಿ ಸಂಬಳದ ಆಸೆಗಾಗಿ ಮಧ್ಯವರ್ತಿಗಳಿಗೆ ಲಕ್ಷಾಂತರ ಹಣ ನೀಡಿ 14 ಜನ ಯುವಕರು ಉಜೇಕಿಸ್ತಾನ್ ಗೆ ತೆರಳಿದ್ದಾರೆ ಆದರೆ ಅಲ್ಲಿಗೆ ತೆರಳಿದ ನಂತರ ತಮಗೆ ಯಾವುದೇ ರೀತಿಯ ಕೆಲಸ ಸಿಗುತ್ತಿಲ್ಲ ಹಾಗೂ ಒಂದು ಹೊತ್ತು ಊಟ ಸಹ ಸಿಗುತ್ತಿಲ್ಲ ಕುಡಿಯಲು ನೀರು ಸೇರಿದಂತೆ ಮೂಲಭೂತ ಸೌಕರ್ಯಗಳು ಕೂಡಾ ಸಿಗುತ್ತಿಲ್ಲ ಎಂದು ಯುವಕರು ಅಳಲು ತೋಡಿಕೊಂಡಿದ್ದಾರೆ.
ಉದ್ಯೋಗ ಅರಸಿ ಭಾರತದಿಂದ ಉಜೇಕಿಸ್ತಾನ್ ಗೆ ಆಗಮಿಸಿದ ಕೆಲ ಯುವಕರು ಕೆಲಸ ಹಾಗು ಅನ್ನ ನೀರು ಸಿಗದೆ ಮರಣ ಹೊಂದಿದ್ದಾರೆ ಹೀಗಾಗಿ ತಮಗೂ ಸಹ ಆತಂಕ ಎದುರಾಗಬಹುದು ಎಂದು ವಿಡಿಯೋ ಸಂಭಾಷಣೆ ಮೂಲಕ ತಮಗೆ ಆದಷ್ಟು ಬೇಗ ಸ್ವದೇಶಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವರದಿ:ಸಂದೀಪ್ ಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ