ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಚಿತ್ತಾಪುರ ಪಟ್ಟಣದಲ್ಲಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರಿಂದ ಕಾ.ನಿ.ಪ ಧ್ವನಿ ತಾಲೂಕ ಕಾರ್ಯಾಲಯ ಉದ್ಘಾಟನೆ

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಕಾ.ನಿ.ಪ ಧ್ವನಿ ತಾಲೂಕ ಕಾರ್ಯಾಲಯವನ್ನು ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಉದ್ಘಾಟಿಸಲಾಯಿತು.
ಮುಂಜಾನೆ 11:00 ಗಂಟೆಗೆ ಕಾರ್ಯಾಲಯದ ಉದ್ಘಾಟನೆಗೆ ರಿಬ್ಬಿನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ ಬಂಗ್ಲಮಲ್ಲಿಕಾರ್ಜುನ ಇಡೀ ರಾಜ್ಯಾದ್ಯಂತ ಕಾ.ನಿ.ಪ ಧ್ವನಿ ಗಟ್ಟಿಯಾಗುತ್ತಿದ್ದು, ಸದಾ ಪತ್ರಕರ್ತರ ಜೊತೆ ಇದ್ದು ಅವರ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ಮುಂದುವರೆಯುತ್ತದೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇನ್ನಷ್ಟು ತೀವ್ರವಾಗಿ ಸಂಚರಿಸಿ ರಾಜ್ಯದ ಮೂಲೆ ಮೂಲೆಯಲ್ಲಿ ಸಂಘ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದರು. ನಂತರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಗಡೆ ಮಾತನಾಡಿ ಬಂಗ್ಲೆ ಮಲ್ಲಿಕಾರ್ಜುನ ಅವರ ಹೋರಾಟ ಸತ್ಯ ಮತ್ತು ನಿಷ್ಠೆಯಿಂದ ಕೂಡಿದೆ ಮತ್ತು ಪತ್ರಕರ್ತರ ಅಭಿವೃದ್ಧಿಗಾಗಿ ಸದಾ ಬಂಗ್ಲೆ ಅವರ ಹೋರಾಟಕ್ಕೆ ಕೈ ಜೋಡಿಸುತ್ತೇವೆ ಎಂದರು ಈ ಸಂದರ್ಭದಲ್ಲಿ ಶ್ರೀ ಷಟ್ ಸ್ಥಲ ಬ್ರಹ್ಮಸೋಮಶೇಖರ ಶಿವಾಚಾರ್ಯರು ಕಂಬಳೇಶ್ವರ ಸಂಸ್ಥಾನ ಮಠ ಚಿತ್ತಾಪುರ, ತಹಶೀಲ್ದಾರ್ ರಾಜಕುಮಾ‌ರ್ ಮತುರ್ಕರ್, ಪಿಎಸ್‌ಐ ಚಂದ್ರಾಮಪ್ಪ, ತಾಲೂಕ ಅಧ್ಯಕ್ಷ ಮಂಜು ಸ್ವಾಮಿ,ನಾಗರಾಜ್ ರೇಷ್ಮೆ, ಈರಣ್ಣ ಸುಲ್ತಾನಪುರ್, ರವಿ ಇವಣಿ, ರವಿಶಂಕರ್ ಬುರ್ಲಿ, ಅನಂತ್ ನಾಗ್ ದೇಶಪಾಂಡೆ, ಮಂಜುನಾಥ ಪೊಲೀಸ್ ಪಾಟೀಲ್, ಚಂದ್ರಶೇಖರ್ ಬಳ್ಳ, ಬಸವರಾಜ ಸಂಕನೂರ್, ಮೊಹಮ್ಮದ್ ಅಲಿ, ಸಂತೋಷ್‌ ಕುಮಾ‌ರ್ ಕಟ್ಟಿಮನಿ. ನರಹರಿ ಕುಲಕರ್ಣಿ, ಯುನೋಸ್ ಪಟೇಲ್, ಕಲ್ಬುರ್ಗಿ ಜಿಲ್ಲಾ ಉಪಾಧ್ಯಕ್ಷ ಮಹಮ್ಮದ್ ಸಾಬೀರ್ ಗೌರಿ, ಪವನ್ ಕುಲಕರ್ಣಿ, ರಾಜಶೇಖ‌ರ್ ಮಾತ್ತೊಳಿ, ಅಫಲ್ಪುರ್ ತಾಲೂಕ ಅಧ್ಯಕ್ಷ ಯಲ್ಲಾಲಿಂಗ ಪೂಜಾರಿ, ಗೌರವಾಧ್ಯಕ್ಷ ಶ್ರೀಶೈಲ್ ಸಿಂಗೆ ಅಬ್ದುಲ್ ನಬಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.

ವರದಿ ಮೊಹಮ್ಮದ್ ಅಲಿ, ಚಿತ್ತಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ