ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ರೈತನಾಗಬೇಕು ಶಿಕ್ಷಕ”

ಹದವಾದ ಮಕ್ಕಳೆದೆಯ ಭೂಮಿಯಲಿ ಬಿತ್ತಬೇಕು
ಅಕ್ಷರಗಳ ಬೀಜವ,
ಬೆಳೆಯಬೇಕು ಶಿಕ್ಷಣದ ಹೆಮ್ಮರವ//
ಸಂಸ್ಕಾರವೆಂಬ ಮೋಡ ಸುರಿಸಬೇಕು ಮಳೆಯ ಎಳೆಯ ಮನದಲಿ, ಮೌಲ್ಯ ಫಸಲು ಹೆಕ್ಕಬೇಕು
ಮಕ್ಕಳ ಭವಿಷ್ಯದಲಿ//
ಬಿತ್ತಿದ ಅಕ್ಷರ ಬೀಜವ ಹುಲುಸಾಗಬೇಕು
ಸಾಲು ಸಾಲು ಬೆಳೆಯಂತೆ,
ಬೆಳೆದು ಮಾನವನಾಗಿ
ದೇಶ ಕಟ್ಟುವಂತೆ//
ಹೂತ ಬೀಜಗಳೆಲ್ಲ ಎದ್ದು
ಆಕಾಶದೆಡೆಗೆ ಚಿಮ್ಮಬೇಕು
ಡಾ.ಬಿ.ಆರ್.ಅಂಬೇಡ್ಕರರಂತೆ
ಭಾವಿ ಸಸಿಗಳೆಲ್ಲ
ಸಧೃಡವಾಗಿ ನಿಲ್ಲುವಂತೆ//
ರೈತನಾಗಬೇಕು ಶಿಕ್ಷಕ
ಮಕ್ಕಳ ಬಾಳಿನಲಿ
ಹದವರಿತು ಬಿತ್ತನೆ ಮಾಡಲು,
ಹರುಷಪಡಬೇಕು ಬೆಳೆದ ಬೆಳೆಯ ಕಂಡು ಬದುಕಿನಲಿ
ಸಾರ್ಥಕತೆ ಮೆರೆಯಲು//

ರಚನೆ:ಹನುಮಂತರಾವ್ ನಾಗಪ್ಪಗೋಳ ಸಾಹಿತಿಗಳು,ಗೋಕಾಕ ಜಿ:ಬೆಳಗಾವಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ