ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಂದಂತೆ ಬದುಕ ಸ್ವೀಕರಿಸಿ…

ಹಲವು ವರುಷಗಳ ಕಾಲ
ಎಲ್ಲವೂ ನನ್ನ ಕೈಯಲ್ಲಿಯೇ
ಇದೆ ಎಂದುಕೊಂಡಿದ್ದೆ
ಅಷ್ಟೇ ಅಲ್ಲ ಎಲ್ಲವೂ
ನನ್ನದೇ ಕೈಯಲ್ಲಿ ಇತ್ತು
ಆದರೀಗ ಅದ್ಯಾವುದೂ
ವಾಸ್ತವವಲ್ಲ
ನನ್ನ ಬದುಕಿನ ಎಲ್ಲಾ ಭಾವಗಳ
ಬಂಧಿಸಿ, ಮರೆಯಾಗಿಸಿ
ಇಲ್ಲದಿರುವುದೆಲ್ಲವೂ
ನನ್ನ ಬಳಿ ಇದೆ ಎಂಬ
ಭ್ರಮೆಯಲಿ ಬದುಕಿನ ಒಲವ ಕಂಡೆ
ಆದರೀಗ ಭ್ರಮೆಯೇ ಕಳಚಿ
ಭಾವನೆಗಳ ದಾಳಿಗೆ ಸಿಲುಕಿ
ಬಂಧಿತೆಯಾಗಿರುವೆ
ಅಪರಾಧಿ ಸ್ಥಾನದಲಿ…
ಭಾವನೆಗಳ ಕಲಹ ಮನವನೇ
ಕಳಚಿ ಕೆಡವಿದೆ
ಭ್ರಮೆಯೇ ಬದುಕೆಂದು
ನೆಲೆಯನೇ ಇಲ್ಲವಾಗಿಸಿದೆಯೆಂದು
ಬದುಕು ಬವಣೆಗಳ ಬಯಲು
ಅಲ್ಲಿ ನಾನು ನನ್ನದು ಎಂಬ ಭಾವ
ಹಸನಾಗಿರೆ ಬಾಳು ಹಸಿರು
ವ್ಯಸನವಾಗಿರೆ ವ್ಯಂಗ್ಯಕೆ ವ್ಯಾಖ್ಯಾನ
ಬದುಕ ಹಸನಾಗಿಸುವುದು
ವ್ಯಂಗ್ಯಕ್ಕೆ ವ್ಯಾಖ್ಯಾನವಾಗಿಸುವುದು
ಎಲ್ಲವೂ ನಮ್ಮದೇ ಕೈಲಿರೆ
ಭ್ರಮೆಯ ಕೂಸಾಗುವುದಾದರೂ
ಏತಕೆ?
ಒಮ್ಮೆ
ಬಂದಂತೆ ಬದುಕ ಸ್ವೀಕರಿಸಿ ನೋಡು…

-ಲೋಹಿತೇಶ್ವರಿ ಎಸ್ ಪಿ
ಚಳ್ಳಕೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ