ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಿರಿಯ ಭೂವಿಜ್ಞಾನಿಯ ಕಾನೂನು ಬಾಹಿರ ಪುನರ್ ನೇಮಕ ರದ್ದುಪಡಿಸಲು ಆಗ್ರಹ

ರಾಯಚೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ಹಿರಿಯ ಭೂವಿಜ್ಞಾನಿ ಶ್ರೀಮತಿ ಪುಷ್ಪಲತಾ ಇವರನ್ನು ಸರ್ಕಾರದ ಆದೇಶ ಉಲ್ಲಂಘಿಸಿ ಅಮಾನತ್ತುಗೊಂಡಿದ್ದ ಹುದ್ದೆ/ಸ್ಥಳದಲ್ಲಿಯೇ ಪುನರ್ ಸ್ಥಾಪಿಸಿದ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಲಖಣಾಪೂರ ಇವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ಶ್ರೀಮತಿ ಪುಷ್ಪಲತಾ ಇವರು ರಾಯಚೂರು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ 2018 ರ ಮೇ 24 ರಂದು ಎ.ಸಿ.ಬಿ ದಾಳಿಯಲ್ಲಿ ರೂ. 1,00,000/- ಲಂಚ ಪಡೆಯುವ ಸಂದರ್ಭದಲ್ಲಿ ಸಿಕ್ಕಿ ಬಿದ್ದು ಸೇವೆಯಿಂದ ಅಮಾನತ್ತುಗೊಂಡಿದ್ದರು.

ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ 25-11-2020 ರ ಆದೇಶದ ಪ್ರಕಾರ, ಅಮಾನತ್ತುಗೊಂಡ ಸರಕಾರಿ ನೌಕರನನ್ನು ಅಮಾನತ್ತಿನಿಂದ ತೆರವುಗೊಳಿಸಿದಾಗ ಆತನನ್ನು/ಅವಳನ್ನು ಯಾವ ಹುದ್ದೆ/ಸ್ಥಾನದಿಂದ ಅಮಾನತ್ತುಗೊಳಿಸಲಾಗಿತ್ತೋ ಅದೇ ಹುದ್ದೆ/ಸ್ಥಾನದಲ್ಲಿ ಪುನರ್ ನೇಮಕ ಮಾಡತಕ್ಕದ್ದಲ್ಲ. ಆದರೆ, ನೇಮಕಾತಿ ಪ್ರಾಧಿಕಾರವು ಆರೋಪಿ ಅಧಿಕಾರಿಯ ಅಮಾನತ್ತು ಆದೇಶವನ್ನು ತೆರವುಗೊಳಿಸಿ ಅವರನ್ನು ಸ್ವಲ್ಪ ದಿನ ಬೇರೆ ಕಡೆ ನಿಯುಕ್ತಿಗೊಳಿಸಿ ನಂತರ ಪುನಃ ಅಮಾನತ್ತುಗೊಂಡಿದ್ದ ಸ್ಥಳ/ಹುದ್ದೆಗೆ (ಕ್ರಿಮಿನಲ್ ವಿಚಾರಣೆ ಬಾಕಿ ಇರುವಾಗ) ವರ್ಗಾಯಿಸಿರುವುದು ಸರ್ಕಾರಿ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.

ಕ್ರಿಮಿನಲ್ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದ್ದಾಗ, ನೌಕರನನ್ನು ಅಮಾನತ್ತಿನಿಂದ ತೆರವುಗೊಳಿಸಲು ಪೊಲೀಸರ/ಲೋಕಾಯುಕ್ತರ ಕಛೇರಿಯ ಸಮ್ಮತಿ ಇಲ್ಲದೆ ಆದೇಶ ಹೊರಡಿಸತಕ್ಕದ್ದಲ್ಲ ಎಂಬ ನಿಯಮವಿದೆ. ಈ ನಿಯಮದಂತೆ, ಪುಷ್ಪಲತಾ ಇವರನ್ನು ಅಮಾನತ್ತಿನಿಂದ ತೆರವುಗೊಳಿಸುವಾಗ ಪೊಲೀಸರ/ಲೋಕಾಯುಕ್ತರ ಕಛೇರಿಯ ಸಮ್ಮತಿ ಪಡೆದಿರುವುದಿಲ್ಲ.

ಆರೋಪಿ ಅಧಿಕಾರಿಯ ವಿರುದ್ಧ ಎ.ಸಿ.ಬಿ ದಾಳಿಗೆ ಸಂಬಂಧಪಟ್ಟ ಕ್ರಿಮಿನಲ್ ವಿಚಾರಣೆ ಬಾಕಿ ಇರುವ ಕಛೇರಿಗೇ ವರ್ಗಾಯಿಸಿರುವುದರಿಂದ, ಆರೋಪಿ ಅಧಿಕಾರಿಯು ತನ್ನ ಅಧಿಕಾರ ಬಳಸಿಕೊಂಡು ತನ್ನ ಮೇಲಿನ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುವುದರಿಂದ ಆರೋಪಿ ಅಧಿಕಾರಿಯ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ತಕ್ಷಣ ರಾಯಚೂರು ಗಣಿ,ಭೂ ವಿಜ್ಞಾನ ಇಲಾಖೆಯಿಂದ ಬಿಡುಗಡೆಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಲಖಣಾಪೂರ ಇವರು ಆಗ್ರಹಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ