ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗುರುಮಾತೆ

ಜೀವನದಲ್ಲಿ ಮೊದಲ ಗುರು ಜನ್ಮದಾತೆ,
ನಂತರ ಅಕ್ಷರ ಕಲಿಸಿಕೊಟ್ಟ ಗುರುಮಾತೆ ರಾಗಬದ್ಧವಾಗಿ ಕಲಿಸಿಕೊಡುವ ಅಕ್ಷರಕ್ಕೆ ನೀವೇ ಸರಸ್ವತಿ,
ಸಾಲು ಸಾಲು ಪದಗಳ ಜೋಡಣೆ ಮಾಡಿಸಿ, ಬರವಣಿಗೆ ಕಲಿಸಿಕೊಟ್ಟ ಗುರು ಮಾತೆ
ಜ್ಞಾನ ಜ್ಯೋತಿಯನ್ನು ಬೆಳಗಿಸಿ ಅಂಧಕಾರವನ್ನು ದೂರ ಮಾಡಿದ ಗುರುಮಾತೆ
ಸುಜ್ಞಾನದ ಕಿರಣವ ಸುರಿಸಿ, ಉತ್ತಮ ಮೌಲ್ಯಗಳ ತುಂಬಿ, ಪ್ರೀತಿ ಕರುಣೆ ಕೊಟ್ಟು ತಾಯಿಯಂತೆ ಸಲುಹಿದ ಗುರುಮಾತೆ.

ಅ ಎಂಬ ಅಕ್ಷರವನ್ನು ಮೊದಲು ಕಲಿಸಿದಿರಿ

ಈ ಅಕ್ಷರದ ಅರ್ಥ ಈಗ ತಿಳಿಯುತ್ತಿದೆ

ಅಕ್ಷರ ಕಲಿತರೆ ಮುಂದೆ ಅರಸನಾಗುವೆ ಎಂದು ಹೇಳಿಕೊಟ್ಟ ಗುರುಮಾತೆ

ಬಾನು, ಭೂಮಿ ವಿಶ್ವವೆಲ್ಲ ಸೂರ್ಯ ಬೆಳಗಿಸುವನು, ನಮ್ಮ ಬಾಳಿನಲ್ಲಿನ ಕತ್ತಲೆಯನ್ನು ತೊಳೆದು ಜ್ಞಾನ ಎಂಬ ಪ್ರಕಾಶತೆಯ ತುಂಬಿ, ಉತ್ತಮ ವ್ಯಕ್ತಿಯಾಗಿಸಿ ಹೊಳೆಯುವ ವಜ್ರದ ರೂಪ ನೀಡಿದ ಗುರುಮಾತೆ.

ನೀವೇ ಒಂದು ಸುಂದರವಾದ ಕಲೆ ನಿಮ್ಮಲ್ಲಿ ಇಲ್ಲ ಯಾವ ಭೇದಭಾವದ ನೆಲೆ ಯಾರನ್ನು ಕಡೆಗಣಿಸದೆ ಎಲ್ಲರಿಗೂ ಸಮಾನವಾಗಿ ಹಂಚಿದ್ದೀರಿ ಜ್ಞಾನವನ್ನು ತಾಯಿಯಂತೆ ನೀವಿಲ್ಲಿ

ಎಲ್ಲಾ ಮುದ್ದು ಮಕ್ಕಳ ಮನಸ್ಸಿನಲ್ಲಿ ಇರುವುದು ನಿಮಗೊಂದು ಅದ್ಭುತವಾದ ನೆಲೆ ಗುರುಮಾತೆ
ಬಾನು, ಭೂಮಿಗೆ ಸೂರ್ಯ ಚಂದ್ರರೇ ಸುಂದರ

ನಮ್ಮ ಶಾಲೆಗೆ ನೀವೇ ಸೃಜನಶೀಲ ಜ್ಞಾನ ಭಂಡಾರ ಗುರುಮಾತೆ ಅಕ್ಷರ ವರದಾನ ನೀಡಿದ ನಿಮಗೆ ತನು ಮನ ಧನ ಕೊಟ್ಟರೂ ತೀರದ ಋಣ.

ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಜೀವಿಸಿದರೆ ತೀರುವುದೇ ಈ ಋಣ? ನಮಗೆ ಜ್ಞಾನವನ್ನು ಕೊಟ್ಟ ತಾಯಿಯ ಚರಣ ಕಮಲಗಳಿಗೆ ವಂದನೆ ಅಭಿನಂದನೆ
ಹುಟ್ಟುಹಬ್ಬದ ಶುಭಾಶಯಗಳು ಗುರುಮಾತೆ.

-ಪರಶುರಾಮ ನಾಯಕ ಹುಲಿಹೈದರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ