ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಾಕಾವ್ಯಗಳು ಇಂದಿನ ಸಮಾಜಕ್ಕೆ ದಾರಿದೀಪಗಳು -ಡಾ.ಭೇರ್ಯ ರಾಮಕುಮಾರ್

ಮೈಸೂರು:ಮಹಾಕಾವ್ಯಗಳು ಸಮಾಜದ ದಾರಿದೀಪಗಳು.ಸ್ವಾರ್ಥ,ಅಶಾಂತಿ,ಅನ್ಯಾಯ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಮಹಾಪುರುಷರ ಆದರ್ಶಗಳ ಅನುಸರಣೆಯೇ ಸಮಾಜದ ಉಳಿವಿಗೆ ಅನಿವಾರ್ಯವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಮೈಸೂರಿನ ಚಾಮುಂಡಿ ಪುರಂನ ಶಿವಾನಂದ ಜ್ಞಾನಾಲಯದಲ್ಲಿ ಮಹಾಕವಿ ಗಜಾನನ ಹೆಗ್ಡೆ ಹಾಗೂ ಪದ್ಮಿನಿ ಹೆಗಡೆ ದಂಪತಿಗಳು ಏರ್ಪಡಿಸಿದ್ದ ದಿವಾಕರ ಹೆಗಡೆ ಅವರ ಮಹರ್ಷಿ ವ್ಯಾಸ ಏಕವ್ಯಕ್ತಿ ಚಂಡ ಮದ್ದಳೆ ಯಕ್ಷಗಾನ ಪ್ರಸಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಾಚೀನ ಭಾರತದ ಮಹಾನ್ ಸಾಧಕರೇ ಸಮಾಜದ ಬೆನ್ನೆಲುಬು.ವ್ಯಾಸ ಮಹರ್ಷಿಯ ಆಂತರಿಕ ತುಮುಲಗಳನ್ನು ನಿವೃತ್ತ ಆಕಾಶವಾಣಿ ಅಧಿಕಾರಿಗಳು,ಹಿರಿಯ ಯಕ್ಷಗಾನ ಚಿಂತಕರೂ ಅದ ದಿವಾಕರ ಹೆಗ್ಡೆ ಅವರು ಬಹಳ ಉತ್ತಮವಾಗಿ, ಮನಸೆಳೆಯುವಂತೆ ರೂಪಿಸಿದ್ದಾರೆ.ರಾಜ್ಯ ಯಕ್ಷಗಾನ ಅಕಾಡೆಮಿಯು ಈ ಬಗ್ಗೆ ಗಮನ ಹರಿಸಬೇಕು.ಭಾರತದ ಸಾಂಸ್ಕೃತಿಕ ಹಿರಿಮೆಯನ್ನು ಯುವ ಜನರಲ್ಲಿ ರೂಡಿಸಲು ಇಂತಹ ಕಾರ್ಯಕ್ರಮಗಳನ್ನು ಶಾಲಾಕಾಲೇಜುಗಳ ಹಂತದಲ್ಲಿ ನಡೆಸಬೇಕು ಎಂದವರು ಅಭಿಪ್ರಾಯಪಟ್ಟರು.

ಹಿರಿಯ ಚಿಂತಕ ರಾಮಶೇಷು ಅವರು ಮಾತನಾಡಿ ವ್ಯಾಸ ಭಾರತದ ಹಲವು ಮಜಲುಗಳನ್ನು ರಚಿಸುವಾಗ ವ್ಯಾಸ ಮಹರ್ಷಿಯ ಮನಸಿನಲ್ಲಿ ನಡೆದಿರಬಹುದಾದ ಆಂತರಿಕ ತುಮುಲಗಳನ್ನು ದಿವಾಕರ್ ಹೆಗ್ಡೆ ಅವರು ತಮ್ಮ ಏಕವ್ಯಕ್ತಿ ಚಂಡ ಮದ್ದಳೆ ಯಕ್ಷಗಾನ ಕಾರ್ಯಕ್ರಮದಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.ಅದರ ಜೊತೆಜೊತೆಗೇ ಸಮಾಜದ ಅಭ್ಯುದಯಕ್ಕೆ ಸಹಾಯಕವಾಗುವ ಚಿಂತನೆಗಳನ್ನು ನೀಡಿದ್ದಾರೆ.ಇದೊಂದು ಯಶಸ್ವೀ ಕಾರ್ಯಕ್ರಮ ಎಂದು ನುಡಿದರು.
ಮಹಾಕವಿ ಗಜಾನನ ಈಶ್ವರ ಹೆಗ್ಗಡೆ ಹಾಗೂ ಸಾಹಿತಿ ಶ್ರೀಮತಿ ಪದ್ಮಿನಿ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿವಾಕರ ಹೆಗ್ಡೆ ವ್ಯಾಸ ಮಹಾಕವಿಯ ಏಕವ್ಯಕ್ತಿ ಚಂಡಮದ್ದಳೆ ಕಾರ್ಯಕ್ರಮ ಸುಂದರವಾಗಿ ನಿರೂಪಿಸಿದರು. ಅನಂತ ಹೆಗ್ಡೆ ಭಾಗವತರು ಹಾಗೂ ಅನಂತ್ ಪದ್ಮನಾಭ ಸಹಕಾರ ನೀಡಿದರು.
ಮೈಸೂರಿನಲ್ಲಿ ಅಪರೂಪವಾದ ವಿಶೇಷವಾದ ಏಕವ್ಯಕ್ತಿ ಚಂಡ ಮದ್ದಳೆ ಯಕ್ಷಗಾನ ಪ್ರಸಂಗವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯ ಸಾಹಿತ್ಯ ಪ್ರೇಮಿಗಳ ಮನ ಸೆಳೆಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ