ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಕೃಷ್ಣ ಜನ್ಮಾಷ್ಟಮಿ ಆಂಗವಾಗಿ ಗೋಪಿಕೆಯ ವೇಷ ಧರಿಸಿದ ಪುಟಾಣಿ

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಕುಮಾರಸ್ವಾಮಿ ಬಡಾವಣೆಯ ಚಾರ್ವಿಕ.S
ಕೃಷ್ಣನಷ್ಟು ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸಿ ಜೀವಿಸಿದವರು ಮತ್ತೊಬ್ಬರಿಲ್ಲ; ಅದು ನಿಸರ್ಗದ, ಎಂದರೆ ಹೊರಗಿನ ಪ್ರಕೃತಿಯಾಗಿರಬಹುದು; ಅಂತರಂಗದ, ಎಂದರೆ ಮನುಷ್ಯನ ಒಳಗಿನ ಪ್ರಕೃತಿಯಾಗಿರಬಹುದು-ಈ ಎರಡನ್ನೂ ಅವನಷ್ಟು ಚೆನ್ನಾಗಿ ಬಲ್ಲವರು ಇನ್ನೊಬ್ಬರಿಲ್ಲ ಕೃಷ್ಣನನ್ನು ನಮ್ಮ ಪರಂಪರೆ ‘ಪೂರ್ಣಾವತಾರಿ’ ಎಂದು ಎತ್ತಿಹಿಡಿದಿದೆ. ಇದಕ್ಕೆ ಕಾರಣವೇ ಅವನು ಪ್ರಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡವನು, ಪ್ರಕೃತಿಯ ಎಲ್ಲಾ ಆಯಾಮಗಳಿಗೂ ಸ್ಪಂದಿಸಿದವನು ಎಂದು. ಅವನು ಕಾಳಿಂಗನನ್ನು ನಿಗ್ರಹಿಸಿದ್ದು, ಗಿರಿಯನ್ನು ಎತ್ತಿಹಿಡಿದದ್ದು –ಇವೆಲ್ಲವೂ ಪ್ರಕೃತಿಯನ್ನು ಕಾಪಾಡುವುದಕ್ಕಾಗಿಯೇ ಅಲ್ಲವೆ? ಹೀಗೆಯೇ ಅವನು ಗೆಳೆಯ, ಸಹೋದರ, ಮಗು, ಗುರು, ರಾಜ, ಸಾರಥಿ, ಪ್ರಿಯಕರ, ಸಂಗಾತಿ, ಯೋಧ, ರಾಜಕಾರಣಿ ಹೀಗೆ ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾದದ್ದು ಕೂಡಾ ಸೃಷ್ಟಿಯಲ್ಲಿ ಪ್ರಕಟವಾಗಿರುವ ಬೇರೆ ಬೇರೆ ಪ್ರಕೃತಿಗಳ ಎಂದರೆ ಸ್ವಭಾವಗಳ ಉದ್ಧಾರಕ್ಕಾಗಿಯೇ ಅಲ್ಲವೆ?

ವರದಿ. ಕೆ.ಮಾರುತಿ ಮುರಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ