ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಭಿಲಾಷೆ

ಸಮಯ ಸಾಗಿದ ಹಾಗೆ ಬಣ್ಣದ ಭಾನೆಗಳು ಬದಲಾಗುತಿವೆ,
ವಿಷಯಕ್ಕೆ ತಕ್ಕಂತೆ ಉಳಿದ ಮಾತುಗಳು ಬದಲಾಗುತಿವೆ,
ಬದುಕು ಬದಲಾದಂತೆ ಬದಲಾಗಲೇಬೇಕು ಮನದ ಭಾಷೆ,
ಬದುಕಿನಂಗಳಕೆ ಬೆಳಕಾಗಬೇಕು ಅಂತರಂಗದ ಅಭಿಲಾಷೆ.!!

ನೀಲಿ ಬಾನಿನಲ್ಲಿ ಹಾರಾಡುವ ಹಕ್ಕಿಯ ಕಲರವವಾಗುವಾಸೆ,
ಬಾಳ ಕಡಲಲ್ಲಿ ತೇಲಿ ಮೀಯುವ ಅರಸಂಚೆಯಾಗುವಾಸೆ.
ಮಾಮರದ ಮಡಿಲಲ್ಲಿ ಕುಳಿತ ಕೋಗಿಲೆಯ ಇಂಪಾಗುವಾಸೆ,
ಹಸಿರು ವನಸಿರಿಯು ಜಗಕೆ ಧಾರೆ ಎರೆಯುವ ತಂಪಾಗುವಾಸೆ.!!

ಕಾಣದ ಲೋಕಕ್ಕೆ ಕ್ಷಣದಲ್ಲಿ ಕರೆದೊಯ್ಯುವ ಕಲ್ಪನೆಯಾಗುವಾಸೆ,
ಮೌನ ಸೋತ ಊರಿನಲ್ಲಿ ಕಟ್ಟಿದ ಮಾತಿನ ಮನೆಯಾಗುವಾಸೆ.
ಅನಿಸಿಕೆಗಳಿಗೆ ಬರಹದಲ್ಲಿ ಹೇಳುವಂತಹ ಕವನವಾಗುವಾಸೆ,
ಒಲವ ಪರಿಚಯಿಸಿ ಮನವ ಮೆರೆಸುವ ಭಾವನೆಯಾಗುವಾಸೆ!!

ಸ್ವರಗಳು ಅರಿಯದ ರಾಗವನ್ನು ತರುವ ಸಂಗೀತವಾಗುವಾಸೆ,
ಸುಂದರ ಸ್ವಪ್ನಲೋಕಕ್ಕೆ ಕೊಂಡೊಯ್ಯುವ ಸಂಭ್ರಮವಾಗುವಾಸೆ.
ಕಳೆದುಹೋದ ಕಾಲವನ್ನು ಕರೆದು ಸಾಂತ್ವನ ಹೇಳತ್ತಲೇ,
ನಮಗಾಗಿ ಬರುವ ನಾಳೆಗಳನ್ನು ಖುಷಿಯಿಂದ ಸ್ವಾಗತಿಸುವಾಸೆ.!!

-ಸುನಿಲ್ ಲೇಖಕ್ ಎನ್ ,ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ