ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಮ್ಮನ್ನು ಕ್ಷಮಿಸಮ್ಮ ಪ್ರಕೃತಿ ಮಾತೆ…

ಜಗತ್ತಿಗೆ ಬೆಳಕು ನೀಡುವ ಸೂರ್ಯ
ಉದಯಿಸಿದ ಕ್ಷಣದಿಂದ
ಬಗೆದಷ್ಟು ಕರುಣೆಯಿಂದ
ನೀಡುವ ಅಕ್ಷಯಪಾತ್ರೆ
ನೀನು ನಮ್ಮ ಪ್ರಕೃತಿಮಾತೆ .

ಮನಸೆಳೆವ ಹಸಿರು, ಬೆಟ್ಟಗುಡ್ಡ,
ಹರಿವ ನೀರಿನ ಜುಳುಜುಳು ನಿನಾದ
ನವಿಲುಗಳ ನರ್ತನ, ದುಂಬಿಗಳ ಝೇಂಕಾರ
ಚಿತ್ತಾಕರ್ಷಕ ಪಕ್ಷಿಗಳ ಕಲರವ
ಎಲ್ಲ ನೀಡುವ ನೀನು ಮಾನವ ಕುಲಕೆ ಕಾಮಧೇನು..

ನಾವು ಮನುಜರು
ಸ್ವಾರ್ಥ ಮನದ ರಕ್ಕಸರು
ನಿನ್ನ ಮಡಿಲ ಬಗೆಬಗೆದು ದೋ ಚಿದ್ದೇವೆ
ದುರಾಸೆಗೆ ಸಿಲುಕಿ ನಿನಗೆ ವಂಚಿಸಿ
ಅಕ್ಷಯಪಾತ್ರೆ ಬರಿದು ಮಾಡಿದ್ದೇವೆ
ಚಿನ್ನದ ಮೊಟ್ಟೆಯ ಅತಿಯಾಸೆಗೆ
ಕೋಳಿಯನೆ ಕೊಂದ ಕತೆಯಂತಾಗಿದೆ
ನಮ್ಮ ಬದುಕು..

ಓ ನಿಸರ್ಗ ಮಾತೆ
ಮುನಿಯ ಬೇಡಮ್ಮ
ಬೇಸರಿಸಿ ಮೈ ಒದರ ಬೇಡಮ್ಮ
ನಿನ್ನ ನು ಹಸಿರ ಗಣಿಯಾಗಿ ಮಾಡಿದ
ನಮ್ಮ ಹಿರಿಯರಿಗೆ ಶಾಂತಿ ನೆಮ್ಮದಿಯ ಬಾಳುವೆ ಕೊಡು,
ಮುಂದೆ ಜಗತ್ತಿನ ಭವಿಷ್ಯದ ಕಣ್ಣುಗಳಾದ
ಪುಟ್ಟ ಕಂದಮ್ಮಗಳ ಬದುಕಿಸಿಕೊಡು,
ಮಕ್ಕಳು ಮಾಡಿದ ತಪ್ಪುಗಳ ಮನ್ನಿ ಸಿಬಿಡು..
ಮುಂದಾದರೂ ಪರಿಸರ ಉಳಿಸುತ್ತೇವೆ,
ಸ್ವಾರ್ಥ ಬಿಟ್ಟು ಬಾಳುತ್ತೇವೆ,
ಹೊತ್ತ ಮಕ್ಕಳ ನೀನೇ ಕ್ಷಮಿಸಿ,
ಕಾಯಬೇಕಲ್ಲವೇ ತಾಯಿ…

-ಡಾ. ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ
ಪುರಸ್ಕೃತ ಸಾಹಿತಿಗಳು
ಮೈಸೂರು
ಮೊಬೈಲ್ -6363172368

ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ಉಂಟಾದ ಪ್ರವಾಹ ಹಾಗೂ ಗುಡ್ಡಕುಸಿತದ ಭೀಕರ ದೃಶ್ಯ ನೋಡಿ ಬರೆದ ಕವನ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ