ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಸೋರುತಿಹದು ಶಾಲೆಯ ಮ್ಯಾಳಿಗೆ” ಎಲ್ಲಿ ಇದ್ದೀರಾ ಕ್ಷೇತ್ರ ಶಿಕ್ಷಣಾಧಿಕಾರಿಗಳೆ??

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ನಮ್ಮೂರ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮೂರು ಕೋಣೆಗಳು ಮಳೆಯಿಂದ ಸೋರುತ್ತಿದ್ದು ಹಾಗೂ ಕೋಣೆಗಳು ಬಿರುಕು ಬಿಟ್ಟಿದ್ದು ವಿದ್ಯಾರ್ಥಿನಿಯರು ಬಯಲಲ್ಲಿ ಕುಳಿತುಕೊಂಡು ಪಾಠ ಕೇಳಬೇಕಾದ ಸಂದರ್ಭ ಬಂದಿದೆ. ವಿದ್ಯಾರ್ಥಿಗಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಅಥವಾ ಆರೋಗ್ಯದಲ್ಲಿ ಏರುಪೇರಾದರೆ ಯಾರು ಜವಾಬ್ದಾರರು? ಶಾಲೆಯ ಕೋಣೆಗಳು ಬಿರುಕು ಬಿಟ್ಟಿದ್ದು ಒಂದು ವೇಳೆ ಕೋಣೆಗಳು ಬಿದ್ದು ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆಗಾರರು ಯಾರು? ಒಟ್ಟು ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ 356, ಅಗರಖೇಡ ಗ್ರಾಮ ಇರುವುದು ಇಂಡಿಯಿಂದ ಕೇವಲ 22 ಕಿ.ಮೀ ಅಂತರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ತಾವು ಒಂದು ಸಲ ಈ ಶಾಲೆಗೆ ಯಾಕೆ ಭೇಟಿ ನೀಡಬಾರದು. ಶಾಲೆಯಲ್ಲಿ ಕಲಿಯುತ್ತಿರುವ ಪುಟಾಣಿಗಳನ್ನು ಒಮ್ಮೆ ನೋಡಿ, ಶಾಲೆಯ ಪರಿಸ್ಥಿತಿಯನ್ನು ಕಣ್ತುಂಬ ನೋಡಿ, ನೋಡಿದ ಮೇಲೆ ತಮಗೆ ಏನಾದರೂ ಆ ಕೋಣೆಗಳ ರಿಪೇರಿ ಅಥವಾ ಹೊಸ ಕಟ್ಟಡ ಕಟ್ಟಬೇಕು ಎನಿಸಿದರೆ ಕಟ್ಟಿಸಬಹುದು. ಇಲ್ಲವಾದಲ್ಲಿ ಶಾಲೆಗೆ ರಜೆ ಘೋಷಿಸಿ ವಿದ್ಯಾರ್ಥಿಗಳಿಗೆ ಮನೆಗೆ ಕಳುಹಿಸಿ. ಕೋಣೆಗಳು ರಿಪೇರಿ ಅಥವಾ ಹೊಸ ಕಟ್ಟಡವಾದ ಮೇಲೆ ಶಾಲೆ ಪ್ರಾರಂಭ ಮಾಡಿ. ಶಾಲೆಯ ಸ್ಥಳವು ಬಹಳ ಇಕ್ಕಟ್ಟ ವಾಗಿದ್ದು ಆದುದರಿಂದ ಶಾಲೆಯನ್ನು ಬೇರಡೆ ಸ್ಥಳಾಂತರ ಮಾಡಿ,ಸರ್ಕಾರಿ ಶಾಲೆಗಳಿಗೆ ಅನ್ನಭಾಗ್ಯ, ಪುಸ್ತಕ ಭಾಗ್ಯ, ಕ್ಷೀರಭಾಗ್ಯ, ಸಮವಸ್ತ್ರ ಭಾಗ್ಯ, ಶೂ ಭಾಗ್ಯ, ಕುಳಿತುಕೊಳ್ಳಲು ಕುರ್ಚಿ ಭಾಗ್ಯ ಎಲ್ಲಾ ಕೊಡ್ತಾ ಇದ್ದೀರಾ ಆದರೆ ಕೋಣೆಗಳ ಭಾಗ್ಯ ಯಾಕೆ ಕೊಡುತ್ತಿಲ್ಲ ಅಧಿಕಾರಿಗಳೇ? ಶಾಲೆಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಅಲ್ಲಿರುವ ಶಿಕ್ಷಕರ ಗತಿ ಪರಿಸ್ಥಿತಿ ಏನಾಗಬಾರದು ಸ್ವಲ್ಪವಾದರೂ ಯೋಚನೆ ಮಾಡಿದ್ದೀರಾ??
ತಾವು ಎಸಿ ರೂಮಿನಲ್ಲಿ ಕುಳಿತುಕೊಂಡು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮಳೆಯಿಂದ ಸೋರುತ್ತಿರುವ ಕೋಣೆಯಲ್ಲಿ ಕೂಡಿಸುವುದು ಇದು ಯಾವ ನ್ಯಾಯರೀ?
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಿ. ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ತಾವೇ ನೇರ ಹೊಣೆಗಾರರಾಗುತ್ತಿರಿ.

ವರದಿ ಮನೋಜ್ ನಿಂಬಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ