ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಮಾನ ಕಾರ್ಖಾನೆಯಲ್ಲಿ ತರಬೇತಿಗೆ ಅರ್ಜಿ ಆಹ್ವಾನ


ಬೆಂಗಳೂರು: ಬೆಂಗಳೂರಿನಲ್ಲಿರುವ ಹಿಂದೂಸ್ಥಾನ
ವಿಮಾನ ಕಾರ್ಖಾನೆಯಲ್ಲಿ (ಎಚ್ ಎ ಎಲ್)2024—2025ನೇ ಸಾಲಿನ ಅಪ್ರೆಂಟಿಸ್ ತರಬೇತಿಗೆ ಸೂಚನೆಯನ್ನು ಪ್ರಕಟಿಸಲಾಗಿದೆ. ಐಟಿಐ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ವಿವಿಧ ಟ್ರೇಡ್ ಗಳಲ್ಲಿ ಸುಮಾರು 2200 ಸ್ಥಾನಗಳು ಲಭ್ಯವಿದ್ದು ಯಾವುದೇ ಪರೀಕ್ಷೆ/ಸಂದರ್ಶನವಿಲ್ಲದೆ ನೇರವಾಗಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ.ದಾಖಲೆಗಳೊಂದಿಗೆ ದಿನಾಂಕ 16/09/2024 ರಿಂದ 30.09.24 ರೊಳಗೆ ತಾಂತ್ರಿಕ ತರಬೇತಿ ಇಲಾಖೆˌ ಎಚ್ ಎ ಎಲ್ ಗೆ ಭೇಟಿ ನೀಡಿ.ಹೆಚ್ಚಿನ ಮಾಹಿತಿಗೆ ಮೇಲಿನ ಪ್ರಕಟಣೆಯನ್ನು ನೋಡಿ. ಹೆಚ್ಚಿನ ಜನಕ್ಕೆ ಪ್ರಚಾರ ನೀಡಿ. ಇಲ್ಲಿ ತರಬೇತಿಪಡೆದವರಿಗೆ ಎಚ್ ಎ ಎಲ್ ಉದ್ಯೋಗದ ನೇಮಕಾತಿಯಲ್ಲಿ ನೇರವಾಗಿ ಪರೀಕ್ಷೆಗೆ ಪತ್ರ ಬರುತ್ತದೆ. ಭವಿಷ್ಯದಲ್ಲಿ ಉದ್ಯೋಗ ಪಡೆಯಲು ವಿಫುಲ ಅವಕಾಶಗಳಿವೆ. ಕಳೆದ 03 ತಿಂಗಳಲ್ಲಿ 400ಕ್ಕೂ ಹೆಚ್ಚು ಸೀಮಿತ ಅವಧಿಯ (ಟೆನ್ಯೂರ್ ಬೇಸ್)ನೇಮಕಾತಿಯಾಗಿದೆ(ತಿಂಗಳಿಗೆ 46ˌ000ರೂ ಸಂಬಳ ಹಾಗೂ ಇತರೆ ಸೌಲಭ್ಯ)ಮುಂದಿನ ವರ್ಷಗಳಲ್ಲಿ 2500ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಕರ್ನಾಟಕದ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿಯನ್ನು ಹಾಕಿ.ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ ಅನ್ಯರಾಜ್ಯದವರ ಪಾಲಾಗುವುದನ್ನು ತಪ್ಪಿಸಿ.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ