ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಾ ಪ್ರಧಾನಿಯಾದರೆ

ಹೇಳಿ ಕೊಟ್ಟು ದುಡಿಮೆಯ ಸೂತ್ರ
ಜಪಿಸಲು ಹೇಳುತ ಶ್ರಮದ ಮಂತ್ರ
ಜೀವನ ಸ್ಥಿತಿಯು ಆಗದಂತೆ ಅತಂತ್ರ
ಎಲ್ಲರಿಗೂ ಕೊಡುವೆ ಸ್ವಾಸ್ಥ್ಯ ಸ್ವಾತಂತ್ರ್ಯ
ನಾ ಭಾರತದ ಪ್ರಧಾನಿಯಾದರೆ.

ಸಾರುತ ಮರ ಬೆಳೆಸುವ ಸಂಸ್ಕಾರ
ರೂಪಿಸುತ ಉತ್ತಮದ ಪರಿಸರ
ತಿಳಿಸಿ ಕಲೆ ಸಂಸ್ಕೃತಿಯ ವಿಚಾರ
ಕೊಡುವೆ ಆರೋಗ್ಯಕ್ಕೆ ಸಹಕಾರ
ನಾ ಭಾರತದ ಪ್ರಧಾನಿಯಾದರೆ.

ತೆಗೆದುಹಾಕಿ ಮೀಸಲಾತಿ ಪದ್ಧತಿ
ಮಾಡುತ ಲಂಚಗುಳಿತನ ರದ್ಧತಿ
ತಂದು ಕಾನೂನಿನ ಹೊಸ ರೀತಿ
ತಿದ್ಧುವೆ ಸಮಾಜದಲ್ಲಿನ ಅನೀತಿ
ನಾ ಭಾರತದ ಪ್ರಧಾನಿಯಾದರೆ.

ಪಡೆದು ಸಚಿವ ಸಂಪುಟ ಸಹಮತ
ಕಾಯ್ದುಕೊಂಡು ಬಡ ಜನರ ಹಿತ
ಬೆಳೆದ ಉತ್ಪನ್ನಗಳಿಗೆ ತೆರಿಗೆ ರಹಿತ
ದುಂದು ವೆಚ್ಚಕ್ಕೆ ಕಡಿವಾಣ ಹಾಕುವೆ
ನಾ ಭಾರತದ ಪ್ರಧಾನಿಯಾದರೆ.

ನುಡಿದಂತೆ ನಡೆದು ಸಾಧಿಸಿ ತೋರುವೆ
ಕೊಟ್ಟ ಮಾತಿಗೆ ತಪ್ಪದೆ ನಡೆಯುವೆ
ದೇಶದ ಅಭಿವೃದ್ಧಿಗೆ ನಿತ್ಯ ಶ್ರಮಿಸುವೆ
ಸರ್ವರಿಗೂ ಸಮಬಾಳನು ಕೊಡುವೆ
ನಾ ಭಾರತದ ಪ್ರಧಾನಿಯಾದರೆ.

ದೇಶ ದ್ರೋಹಿಗಳಿಗೆ ಹಾಕುವೆ ಬರೆ
ಅತ್ಯಾಚಾರಿಗೆ ತಪ್ಪಿಸೆನು ನಿತ್ಯ ಸೆರೆ
ಕೊಡುತ ನೆಮ್ಮದಿಯ ಬಾಳಿಗೆ ಕರೆ
ದೇಶಕ್ಕಾಗಿ ಬಾಳುವೆ ಇದಂತೂ ಖರೆ
ನಾ ಭಾರತದ ಪ್ರಧಾನಿಯಾದರೆ…

✍️ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
( ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ