ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಲಕ್ಕಮ್ಮ ದೇವಿ ಜಾತ್ರಾ ಮಹೋತ್ಸವ ಇಂದು

ಬಾಗಲಕೋಟೆ :ಹುನಗುಂದ ತಾಲೂಕಿನ ಬನಹಟ್ಟಿಯ ಶ್ರೀ ಗ್ರಾಮ ದೇವತೆ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ಯ 15.02.2025 ರ ಶನಿವಾರದಂದು ಅಭಿಷೇಕ ಸುಮಂಗಲೆಯರಿಂದ ಕುಂಭ ಮೆರವಣಿಗೆ ಸಾಮೂಹಿಕ ವಿವಾಹ ಉಚ್ಛಯ್ಯನ ಮಹೋತ್ಸವ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ ಅಂದು ಮುಂಜಾನೆ ಲಕ್ಕಮ್ಮ ದೇವಿಗೆ ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ನಂತರ ಕುಂಭ ಮೆರವಣಿಗೆ ಜರುಗಲಿದೆ
ಮುಂಜಾನೆ 11:30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಹಾಲಕೇರಿ ಮುಪ್ಪಿನ ಬಸವಲಿಂಗ ಶ್ರೀಗಳು ಅಮೀನಗಡ ಶಂಕರ ರಾಜೇಂದ್ರ ಶ್ರೀಗಳು ಗುಳೇದಗುಡ್ಡ ಅಭಿನವ ಒಪ್ಪೇಶ್ವರ ಶ್ರೀಗಳು, ಕೋಲಾರ್ ದಿಗಂಬರೇಶ್ವರ ಸಂಸ್ಥಾನ ಮಠದ ಯೋಗಿ ಕಲ್ಲಿನಾಥ ದೇವರು ಪುರತಗೇರ (ಪುರಗರೆ) ಕೈಲಾಸ ಲಿಂಗ ಶ್ರೀಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಮೂರ್ತಿ ಅಯ್ಯಪ್ಪಯ್ಯ ಸಿ ಸಾರಂಗಮಠ ವಹಿಸಲಿದ್ದಾರೆ , ಹಾಗೂ ನ್ಯಾಯವಾದಿ ವೇದಮೂರ್ತಿ ಕೆಎಮ್ ಸಾರಂಗಮಠ ಮತ್ತು ನಿವೃತ್ತ ಶಿಕ್ಷಕ ಬಸವರಾಜ್ ಹೆಚ್ ಪಾಟೀಲ್ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಸಂಸದ ಪಿಸಿ ಗದ್ದಿಗೌಡರ ಕರ್ನಾಟಕ ಸರ್ಕಾರದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಹುನಗುಂದದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ ಎಸ್ ಆರ್ ಎನ್ ಇಫೌಂಡೇಶನ್, ಅಧ್ಯಕ್ಷೆ ಎಸ್ ಆರ್ ನವಲಿ ಹಿರೇಮಠ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗಪ್ಪ ಕಲ್ಗುಡಿ ಸದಸ್ಯರಾದ ಶ್ರೀಮತಿ ಬಸಮ್ಮ ಸುರೇಶ್ ಬಾದವಾಡಗಿ ಮಲ್ಲಪ್ಪ ಸಂ ಗೊನ್ನಾಗರ ಭಾಗವಹಿಸಲಿದ್ದಾರೆ.
ಜಾತ್ರೆಯ ನಿಮಿತ್ತ ಕಳೆದ ಐದು ದಿನದಿಂದ ೧೪ನೇ ಶತಮಾನದ, ಸಾದ್ವಿಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪುರಾಣ ಮುಕ್ತಾಯ ಸಮಾರಂಭ ಅಂದು ರಾತ್ರಿ ಜರುಗಲಿದೆ ಜಾತ್ರೆಯ ನಿಮಿತ್ತ ಅಂದು ರಾತ್ರಿ 10:30 ಕ್ಕೆ ಶ್ರೀ ಮೋಹನ್ ಕಿರಣಗಿ ಅವರಿಂದ ರಚಿತವಾದ ಅಣ್ಣ ತಂಗಿ ನಾಟಕ ಜರುಗಲಿದೆ ಕಾರಣ ಸುತ್ತಮುತ್ತಲಿನ ಸದ್ಭಕ್ತರು ಪಾಲ್ಗೊಂಡು ಲಕ್ಕಮ್ಮ ದೇವಿ ಕೃಪೆಗೆ ಪಾತ್ರರಾಗಬೇಕೆಂದು ಬನಹಟ್ಟಿ ಜಾತ್ರಾ ಸಮಿತಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ