ಕೊಪ್ಪಳ: ಡಣಾಪುರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಶೈಲ ಮಾಲಾಧಾರಿಗಳಿಂದ 20ನೇ ವರ್ಷದ ಅನ್ನದಾಸೋಹ ಕಾರ್ಯವು ಜರುಗಿತು.
ತಾಲೂಕಿನ ಡಣಾಪೂರ ಗ್ರಾಮದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಬೆಳಗ್ಗೆಯಿಂದ ನಾನಾ ಬಗೆಯ ವಿಶೇಷ ಪೂಜೆ, ಭಕ್ತಿ ಹಾಡು ಭಜನೆಗಳು ಜರುಗಿದವು. ದೇವಸ್ಥಾನವಕ್ಕೆ ವಿಶೇಷ ಪುಪ್ಪಲಂಕಾರ ಮಾಡಲಾಗಿತ್ತು.
ಈ ವೇಳೆಯಲ್ಲಿ ಮಲ್ಲಯ್ಯ ಮಾಲಾಧಾರಿಗಳಾದ ಜೆ ಬೀಮನಗೌಡ , ಪಿ.ಪಿ.ಮಂಜುನಾಥ , ವೀರನಾಗಪ್ಪ , ಬಸವರಾಜ ವೈ ,ಪಿಡ್ಡಪ್ಪ ,ಮಂಜುನಾಥ ಕುಂಬಾರ ,ಲಿಂಗರಾಜ ಹೂಗಾರ , ಮೃತ್ಯುಂಜಯ , ಮೌನೇಶ ,ಸಿ ಹೆಚ್ ಮಂಜುನಾಥ , ವೀರನಗೌಡ , ಮಲ್ಲಿಕಾರ್ಜುನ , ರಾಜೇಂದ್ರ , ಮಲ್ಲಿಕಾರ್ಜುನ , ಮಡ್ಢೆರ ಮಂಜುನಾಥ ,ಬಿ.ಬೃಂದಾ ಸೇರಿದಂತೆ ಭಕ್ತಾದಿಗಳು ಭಾಗಿ ಇದ್ದರು.
