ಬಳ್ಳಾರಿ/ ಕಂಪ್ಲಿ : ಕಂಪ್ಲಿ ತಾಲೂಕು ಎಸ್ ಡಿ ಪಿ ಐ ಪಕ್ಷದ ವತಿಯಿಂದ ಎಸ್.ಡಿ.ಪಿ.ಐ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ .ಕೆ ಫೈಜಿ ರವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಅಕ್ರಮವಾಗಿ ಬಂಧಿಸಿರುವುದನ್ನು ಖಂಡಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ಮಹಮ್ಮದ್ ರಫೀಕ್ ಮಾತನಾಡಿ ನಾವು ಅನ್ಯಾಯದ ವಿರುದ್ಧ ತ್ಯಾಗ ಬಲಿದಾನಕ್ಕೆ ಸಿದ್ಧ ಎಂದರು. ವಕ್ಫ಼್ ಬಿಲ್ ವಿರುದ್ಧ ರಾಷ್ಟ್ರಾದ್ಯಂತ ಎಸ್ ಡಿ ಪಿ ಪಕ್ಷ ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡುತ್ತಿದೆ ಹಾಗೂ ಎಲ್ಲಿ ಅನ್ಯಾಯ ಅಕ್ರಮ ನಡೆಯುತ್ತಿದೆ ಅಲ್ಲಿ ಎಸ್ ಡಿ ಪಿ ಐ ನ್ಯಾಯದ ಪರವಾಗಿ ಸಂವಿಧಾನಬದ್ಧವಾಗಿ ಹೋರಾಟ ಮಾಡುತ್ತದೆ ಆದ್ದರಿಂದ ಅತಿ ಶೀಘ್ರವಾಗಿ ನಮ್ಮ ಅಧ್ಯಕ್ಷರನ್ನು ಬಿಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಇಮ್ರಾನ್ ಖಾನ್, ಕಾರ್ಯದರ್ಶಿ ದೌಲತ್ ಖಾನ್, ಸಹ ಕಾರ್ಯದರ್ಶಿ ಆಸಿಫ್, ಪದಾಧಿಕಾರಿಗಳಾದ ರಾಜಾವಲಿ, ರಾಜ, ಹುಸೇನ್ ಇಮ್ರಾನ್ ನಜೀರ್, ಅಲ್ತಾಫ್, ಅಲ್ಲಾವುದ್ದೀನ್, ಶಾಕಿರ್, ದಸ್ತಗೀರ್, ಅಬೂಬಕರ್, ಇರ್ಷಾದ್ , ರಾಜಾವಲಿ ಸಹಕಾರಿ ಮತ್ತು ಕಾರ್ಯಕರ್ತರು ಇದ್ದರು.
ವರದಿ: ಜಿಲಾನ ಸಾಬ್ ಬಡಿಗೇರ