ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಜನರ ಸೇವೆ ಮಾಡುವುದು ಗೃಹ ರಕ್ಷಕದಳದ ಕರ್ತವ್ಯ : ವೈ.ಶೇಖ್‌ಸಾಬ್

ಬಳ್ಳಾರಿ/ ಕಂಪ್ಲಿ : ಕಂಪ್ಲಿ ಸೇರಿದಂತೆ ರಾಜ್ಯಾದ್ಯಂತ ಗೃಹ ರಕ್ಷಕದಳವು ಸ್ವಯಂ ಸೇವಾ ಕಾರ್ಯದೊಂದಿಗೆ ಜನರ ಸೇವೆ ಮಾಡಿಕೊಂಡು ಬರಲಾಗಿದೆ. ಗೃಹ ರಕ್ಷಕದಳದವರು ನಿಷ್ಠೆ, ಪ್ರಾಮಾಣಿಕತೆಯಿಂದ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದು ಕರ್ನಾಟಕ ಗೃಹ ರಕ್ಷಕದಳದ ಬಳ್ಳಾರಿ ಜಿಲ್ಲಾ ಸಮಾದೀಷ್ಟರಾದ ವೈ.ಶೇಖ್ ಸಾಬ್ ಹೇಳಿದರು.
ಸ್ಥಳೀಯ ಸರ್ಕಾರಿ ಷಾಮಿಯಾಚಂದ್ ಕಾಲೇಜು ಆವರಣದ ಹಿಂಬದಿಯಲ್ಲಿರುವ ಗೃಹ ರಕ್ಷಕದಳದ ಕಛೇರಿಯಲ್ಲಿ ಇತ್ತೀಚೆಗೆ ಗೃಹ ರಕ್ಷಕದಳದ ಕೆ.ಉತ್ತಣ್ಣ ನಿಧನ ಹೊಂದಿದ ಹಿನ್ನಲೆ ಕರ್ನಾಟಕ ಗೃಹ ರಕ್ಷಕದಳದಿಂದ 74,800 ರೂ.ನಗದು ಸಹಾಯಧನವನ್ನು ಅವರ ಪತ್ನಿ ಪಾರ್ವತಿ ಇವರಿಗೆ ವಿತರಿಸಿದ ನಂತರ ಮಾತನಾಡಿ, ಕೆ.ಉತ್ತಣ್ಣ ಇವರು 30 ವರ್ಷ ಗೃಹ ರಕ್ಷಕದಳದಲ್ಲಿ ಕರ್ತವ್ಯದೊಂದಿಗೆ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯವಾಗಿದೆ. ಈ ಸಹಾಯಧನವನ್ನು ಜೀವನಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಕರ್ತವ್ಯದಲ್ಲಿ ನಿಧನ ಹೊಂದಿದರೆ, ಅಂತವರ ಕುಟುಂಬಗಳಿಗೆ ಸರ್ಕಾರ 10 ಸಾವಿರ ಸಹಾಯಧನ ನೀಡಲು ಮುಂದಾಗಿದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ಘಟಕಾಧಿಕಾರಿ ಬಿ.ಬಸಲಿಂಗಪ್ಪ, ಸಂಡೂರು ಘಟಕಾಧಿಕಾರಿ ಮಲ್ಲಿಕಾರ್ಜುನ, ಕಂಪ್ಲಿ ಘಟಕಾಧಿಕಾರಿ ಹೆಚ್.ಗಿರಿಧರ್, ಸಿಕೆಎಂಎಸ್ ಹೊನ್ನೂರವಲಿಸಾಬ್, ಸೆಕ್ಷನ್ ಲೀಡರ್‌ಗಳಾದ ಕೆ.ಜಗದೀಶ, ಕೆ.ಸುರೇಶ, ಸಹಾಯಕ ಸೆಕ್ಷನ್ ಲೀಡರ್‌ಗಳಾದ ಎ.ನಾರಾಯಣ ಹಾಗೂ ಗೃಹ ರಕ್ಷಕದಳದವರು ಇದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ