ನಾಲ್ ರೋಡ್ ಗ್ರಾಮದಲ್ಲಿ ರಸ್ತೆ ಸಮೀಪ ಇರುವ ಜಾಗದಲ್ಲಿ ಕೆಲವರು ಅಂಗಡಿ ತೆರೆಯಲು ನಮಗೂ ಅವಕಾಶ ಕೊಡಿ ಇದು ನಮ್ಮ ಜಾಗ ಎಂದು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.
ಹನೂರು ಶಾಸಕ ಎಂ ಆರ್ ಮಂಜುನಾಥ್ ವಿಷಯ ತಿಳಿದ್ದ ನಂತರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರು ಕುರಿತು ಮತನಾಡಿ ನಾನು ಸ್ಥಳವನ್ನು ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಆ ಸ್ಥಳ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೊ ಅಥವಾ ಅರಣ್ಯ ಇಲಾಖೆಗೆ ಬರುತ್ತಾ ಎಂದು ತಿಳಿದು ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಆದರೆ ನಿಮ್ಮೆಲ್ಲರಿಗೂ ಮನೆ ನಿರ್ಮಾಣ ಮಾಡಲು ಸ್ಥಳ ಇಲ್ಲದೆ ಇರುವ ಕುಟುಂಬಕ್ಕೆ ಸ್ಥಳ ಗುರುತಿಸಿ ಸರ್ಕಾರಿ ಅನುದಾನ ನೀಡಿ ಮನೆ ನಿರ್ಮಾಣ ಮಾಡವ ಚಿಂತನೆಯಲ್ಲಿ ಇದ್ದೇವೆ ಇದಕ್ಕೆ ಸ್ವಲ್ಪ ದಿನ ಕಾಲಾವಕಾಶ ಕೊಡಿ ಎಂದು ತಿಳಿಸಿದರು.
ಶಾಸಕರ ಮಾತಿಗೆ ಸ್ಪಂದಿಸಿ ಪ್ರತಿಭಟನೆಯನ್ನು ಕೈಬಿಟ್ಟರು ಈಗ ಸಂದರ್ಭದಲ್ಲಿ ರಾಮಾಪುರ ಇನ್ಸ್ ಪೆಕ್ಟರ್ ಶೇಷಾದ್ರಿ, ಅರಣ್ಯ ಇಲಾಖೆ ಮಾದೇಶ್, ಉಪತಹಸೀಲ್ದಾರ್ ಸುರೇಖಾ, ವಿ.ಎ. ಸುರೇಶ್ ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್