ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮನವಿಗೆ‌ ಸ್ಪಂದಿಸಿ ಇಲ್ಲವಾದರೆ ಧರಣಿ ಎದುರಿಸಿ !?

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಕೆಇಬಿ ಮಾರ್ಗವಾಗಿ ಆಲ್ದಾಳಕ್ಕೆ ಹಾದು ಹೋಗಿರುವ ಈ ವಿದ್ಯುತ್ ಆಲ್ದಾಳ ಗ್ರಾಮದಲ್ಲಿ ರಾತ್ರಿ-ಹಗಲು ವಿದ್ಯುತ್ ಇಲ್ಲದೆ ಇಲ್ಲಿನ ಜನರು ಪರದಾಡುತ್ತಿದ್ದು ಕೂಡಲೇ ಈ ಗ್ರಾಮಕ್ಕೆ ನಿರಂತರ ವಿದ್ಯುತ್ ಅನ್ನು ಒದಗಿಸಿಕೊಡುವ ಕುರಿತು ಕ.ವಿ.ಪ್ರ.ಸ.ನಿ.ನಿ ಜೆಸ್ಕಾಂ ಶಾಖೆ ಶಹಾಪುರದ ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರು ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಗ್ರಾಮದಲ್ಲಿ ಅನೇಕ ರೈತರು ತಮ್ಮ ತಮ್ಮ ನೀರಾವರಿ ಜಮೀನುಗಳಲ್ಲಿ ಪಂಪಸೆಟ್ ಅಳವಡಿಸಿಕೊಂಡು ಆ ಪಂಪ್ ಸೆಟ್ ಗಳ ಮೂಲಕವೇ ನೀರು ಹರಿಬಿಡುತ್ತಿದ್ದು ಈ ಗ್ರಾಮದಲ್ಲಿ ಸಿಂಗಲ್ ಫೇಸ್ ವಿದ್ಯುತ್ ನಿಂದ ಮೋಟಾರ ಚಲಾವಣೆಯಾಗದೇ ಸುಟ್ಟು ಹೋಗುತ್ತಿದ್ದು ಕಾರಣ ಕೂಡಲೇ ಈ ಗ್ರಾಮಕ್ಕೆ ನಿರಂತರ ವಿದ್ಯುತ್‌ನ್ನು ಒದಗಿಸಿ ಗ್ರಾಮದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು. ಒಂದು ವೇಳೆ ನಮ್ಮ ಮನವಿ ಪತ್ರಕ್ಕೆ ತಾವುಗಳು ನಿರ್ಲಕ್ಷಿಸಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ರೈತ ಸಂಘದ ವತಿಯಿಂದ ತಮ್ಮ ಕಛೇರಿಯ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವಾಸುದೇವ ಮೇಟಿ ಬಣ ಜಿಲ್ಲಾಧ್ಯಕ್ಷರಾದ ಮಲ್ಲನಗೌಡ ಅಗರಟಗಿ ಹಾಗೂ ಶಹಾಪುರ ತಾಲೂಕು ಅಧ್ಯಕ್ಷರಾದ ದೇವೇಂದ್ರಪ್ಪ ಕೋಲ್ಕರ್ ಶಿರವಾಳ್, ತಾಲೂಕು ಉಪಾಧ್ಯಕ್ಷರಾದ ರಾಜು, ತಾಲೂಕು ಸಂಚಾಲಕ ಭೀಮರಾಯ ಇಟ್ಟಗಿ, ಆಲ್ದಾಳ ಹೋಬಳಿ ಅಧ್ಯಕ್ಷ ಚಂದ್ರಕಾಂತ್ ಅಣಬಿ, ಗೌರವಾಧ್ಯಕ್ಷ ಬಾಬು ಆಲ್ದಾಳ, ಗ್ರಾಮ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು ,ಪದಾಧಿಕಾರಿಗಳು
ಸದಸ್ಯರು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ