ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವರ್ಗಾವಣೆ ಮಾಡದಿದ್ದರೆ ಉಗ್ರ ಹೋರಾಟ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಂಜಲಭಾವಿ ಗ್ರಾಮದ ಗ್ರಾಮಸ್ಥರಾಗಿದ್ದು ಬಿಂಜಲಭಾವಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳು ರೈತರಿಗೆ ಮತ್ತು ರೈತರೆಲ್ಲರಿಗೂ ರೈತ ಸಂಘದಿಂದ ಸಭೆ ಸೇರಿದಾಗ ಈ ಕೆಳಗಿನಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ದೂರು ನೀಡಿರುತ್ತಾರೆ. ವಾರಸಾ ವಹಿವಾಟು, ವಾ, ಹಕ್ಕು ಬಿಡುಗಡೆ, ಹಕ್ಕು ದಾಖಲೆ, ಪೋಡಿ ಅರ್ಜಿ, ಇವುಗಳಿಗೆ ಗ್ರಾಮ ಆಡಳಿತ ಅಧಿಕಾರಿ ಹಣದ ಆಮಿಷ ಒಡ್ಡಿ ರೈತರಲ್ಲಿ 40,000/- ರೂಪಾಯಿದಿಂದ 1.00.000/- ಲಕ್ಷದವರೆಗೆ ಹಣ ಕೇಳುತ್ತಾರೆ ಮತ್ತು ಗ್ರಾಮದ ಪರಿಹಾರ ವಿತರಣೆ ಸಮಯದಲ್ಲಿ ರೈತರಲ್ಲಿ ಹಣದ ಬೇಡಿಕೆ ಇಡುತ್ತಾರೆ. ಜಮೀನದ ಬೆಳೆ ಸಮೀಕ್ಷೆಗೆ ಪ್ರತಿ ಖಾತೆಗೆ 100 ರೂ. ನಂತೆ ಹಣ ಕೇಳುತ್ತಾರೆ. ಬಿಂಜಲಭಾವಿ ಗ್ರಾಮಕ್ಕೆ 10 ವರ್ಷದಿಂದ ಒಂದು ದಿನವೂ ಬಂದಿರುವುದಿಲ್ಲ, ರೈತರು ಕೇಳಿದರೆ ತಾಳಿಕೋಟೆಗೆ ಬನ್ನಿ ಅಂತಾ ಹೇಳುತ್ತಾರೆ ಇವರನ್ನು ಬಿಂಜಲಭಾವಿ ಗ್ರಾಮದಿಂದ ಬೇರೆ ಕಡೆ ವರ್ಗಾವಣೆ ಮಾಡಿ ರೈತರಿಗೆ ಸ್ಪಂದಿಸುವ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿ ಇವರನ್ನು ವರ್ಗಾವಣೆ ಮಾಡಿ. ಒಂದು ವೇಳೆ ಇವರನ್ನು ವರ್ಗಾವಣೆ ಮಾಡದೇ ಇದ್ದರೆ ಜಿಲ್ಲಾ ಅಧಿಕಾರಿಗಳ ಕಾರ್ಯಲಯ ಮುಂದೆ ಸಮಸ್ತ ಬಿಂಜಲಭಾವಿ ಗ್ರಾಮದ ರೈತರು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಷ್ಟ್ರೀಯ ರೈತ ಸಂಘ ಜಿಲ್ಲಾ ಮಹಿಳಾ ಅಧ್ಯಕ್ಷರು ಶ್ರೀಮತಿ ರೇಣುಕಾ ಶಾಂತಗೌಡ ಪಾಟೀಲ್, ಮೈಬುಬಬಾಷ ಮನಗೂಳಿ ಜಿಲ್ಲಾ ಉಪಾಧ್ಯಕ್ಷರು ತಾಳಿಕೋಟೆ, ತಾಲೂಕಾ ಅಧ್ಯಕ್ಷರು ಅಶೋಕಗೌಡ ಬ ಪಾಟೀಲ್, ತಾಳಿಕೋಟೆ ತಾಲೂಕಾ ಯುವ ಮೋರ್ಚಾ ಅಧ್ಯಕ್ಷರು ಗೌಡಪ್ಪಗೌಡ ಬ ಹಳಿಮನಿ, ಬಿಂಜಲಬಾವಿ ಗ್ರಾಮ ಘಟಕ ಅಧ್ಯಕ್ಷರು ವಿಜಯಕುಮಾರ್ ಉಕ್ಕಲಿ, ಅಸ್ಕಿ ಗ್ರಾಮ ಘಟಕ ಅಧ್ಯಕ್ಷರು ಸಂಗನಗೌಡ ಸಾ ಬಿರಾದಾರ್, ಮಲ್ಲಪ್ಪ ಅಂಗಡಿ ಮಹಾದೇವ ಚಟ್ನಳ್ಳಿ, ಶ್ರೀಶೈಲ್ ಉಕ್ಕಲಿ ಸದಸ್ಯರು, ಶರಣಗೌಡ ಕೊಣ್ಯಳ, ಯಂಕಪ್ಪ ಗುತ್ಯಾಲ್ ಎಚ್ಚರಿಕೆ ನೀಡಿದ್ದಾರೆ.

ವರದಿಗಾರರು : ನಜೀರ್ ಅಹ್ಮದ್ ಚೋರಗಸ್ತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ