ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಿಂದೂಗಳ ಹೊಸವರ್ಷ

ಹೊಸ ವರುಷ ಮರಳಿ ಬಂದಿತು
ಯುಗಾದಿ ಹಬ್ಬ ಖುಷಿಯ ತಂದಿತು
ಮನಕೆ ಹೊಸತನದ ಮುದ ನೀಡಿತು
ವರ್ಷದ ಹೊಸ ಸಂವತ್ಸರಕ್ಕೆ ಕಾಲಿಟ್ಟಿತು.!

ಹೊಸ ವರುಷದ ದಿನವು
ಹೊಸ ಋತುವಿನ ಚೆಲುವು
ಮನಕೆ ಮೋಹಕತೆಯ ಆನಂದವು
ಬೇವು ಮಾವುಗಳ ಘಮವು.!

ಹೊಸ ವರ್ಷಕ್ಕೆ ಶ್ರೀಕಾರ
ಮರಿ ದುಂಬಿಗಳ ಝಂಕಾರ
ರೈತರಿಗೆ ಮಳೆ ಬೆಳೆಗಳ ಲೆಕ್ಕಾಚಾರ
ಬೇವು ಬೆಲ್ಲಗಳ ಸ್ವೀಕಾರ.!

ಕಷ್ಟ ಸುಖಗಳ ಹಂಚಿಕೊಳ್ಳುತ್ತ
ಮನದಲ್ಲಿ ಹೊಸ ಆಸೆ ಬೆಳೆಸುತ್ತ
ಗುರಿಯ ಕಡೆ ಭರವಸೆ ನೀಡುತ್ತ
ನವ ಕನಸುಗಳನ್ನು ಚಿಗುರಿಸುತ್ತ.!

ಪ್ರಕೃತಿ ದೇವತೆಗೆ ನಮಿಸೋಣ
ಹೊಸತನವನ್ನು ಸ್ವಾಗತಿಸೋಣ
ಸಂತಸದಿ ಎಲ್ಲರೊಂದಿಗೆ ನಲಿಯೋಣ
ಸಂಭ್ರಮದಿ ಯುಗಾದಿ ಆಚರಿಸೋಣ.!

✍️ಮುಡಿಯಪ್ಪ ಹಣಮಂತ ಹುಡೇದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ