ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅದ್ದೂರಿಯಿಂದ ಜರುಗಿದ ಶ್ರೀ ಚನ್ನಕೇಶ್ವರ ದೇವರ ಜಾತ್ರಾ ಮಹೋತ್ಸವ

ಗುರುಮಠಕಲ್/ನಜರಾಪುರ: ಗುರುಮಠಕಲ್ ನಗರದಿಂದ ಕೇವಲ 6 ಕಿ. ಮಿ ದೂರದಲ್ಲಿರುವ ನಜರಾಪುರ ಪ್ರಕೃತಿಯ ರಮಣೀಯ ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿದ್ದು, ದಬ್ ದಬಿ ಜಲಪಾತ ಮತ್ತು ಹಳ್ಳದ ಪಕ್ಕದಲ್ಲಿರುವ ಶ್ರೀ ಚನ್ನಕೇಶ್ವರ ದೇವಸ್ಥಾನಕ್ಕೆ ಹೆಸರುವಾಸಿ, ಶ್ರೀ ಚೆನ್ನಕೇಶವ ಸ್ವಾಮಿ ರಥೋತ್ಸವವು ಭಕ್ತರ ಜೈಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಿನ್ನೆ ರಾತ್ರಿ ಜರುಗಿತು. ದಿನಾಂಕ:29/03/2025 ರಿಂದ ಪ್ರಾರಂಭವಾಗಿರುವ ಜಾತ್ರಾ ಮಹೋತ್ಸವ, ವಿಶೇಷ ಪೂಜೆ, ಪಲ್ಲಕ್ಕಿ ಸೇವೆ ಮತ್ತು ಛತ್ರಪತಿ ಶಿವಾಜಿ ಯುವಕರ ಪಡೆಯಿಂದ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕಬ್ಬಡಿ ಪಂದ್ಯ ಸಹಸ್ರಾರು ಭಕ್ತ ಸಮೂಹಕ್ಕೆ ಮುದ ನೀಡಿದೆ.
ಇಂದು ಕೈ ಕುಸ್ತಿ ಕಾರ್ಯಕ್ರಮ ಜರುಗುವುದು ಎಂದು ದೇವಸ್ಥಾನದ ವ್ಯವಸ್ಥಾಪಕರು ಶ್ರೀ ಚೆನ್ನಕೇಶ್ವರ ದೇವಸ್ಥಾನ ಕಮಿಟಿ ಹಾಗೂ ಪದ್ದತ್ತ ಭಜನ ಮಂಡಳಿ ಸದಸ್ಯರು ತಿಳಿಸಿದರು, ಜಾತ್ರಾ ಮಹೋತ್ಸವದಲ್ಲಿ ಮೋಹನರೆಡ್ಡಿ, ಸದಾ ಶಿವರೆಡ್ಡಿ, ರಘುನಾಥ ರೆಡ್ಡಿ, ನರಸ ರೆಡ್ಡಿ ಪೋ. ಪಾಟೀಲ ಗಡ್ಡೆಸುಗೂರು, ಸೋಮಶೇಖರ ರೆಡ್ಡಿ, ಲಕ್ಷ್ಮೀ ರೆಡ್ಡಿ, ಭೀಮ ರೆಡ್ಡಿ, ಮಲ್ಲಿಕಾರ್ಜುನ ಅಡ್ಕಿ ಹಾಗೂ ಸಮಸ್ಥ ನಜರಾಪುರ ಗ್ರಾಮಸ್ಥರು, ಸುತ್ತ ಮುತ್ತಲಿನ ಶ್ರೀ ಚೆನ್ನಕೇಶವ ಸ್ವಾಮಿ ಅಪಾರ ಭಕ್ತರು ಭಾಗವಹಿಸಿದ್ದರು.

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ