ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಿಂದೂ ಯುವ ಘರ್ಜನೆ ವತಿಯಿಂದ ರಾಮನವಮಿ ಆಚರಣೆ.

ಯಾದಗಿರಿ/ಗುರುಮಠಕಲ್:
ಪ್ರಭು ಶ್ರೀರಾಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕ – ನಿತಿನ್ ತಿವಾರಿ.

ವಿಶೇಷ ಪೂಜೆ ಅಲಂಕಾರದೊಂದಿಗೆ ಪ್ರಭು ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ, ಹನುಮಂತರ ಉತ್ಸವ ಮೂರ್ತಿಗಳಿಗೆ ನಗರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆ ಜೈಕಾರಗಳ ಮೂಲಕ ಅಂಬಿಗರ ಚೌಡಯ್ಯ ವೃತ್ತಕ್ಕೆ ತಲುಪಿತು,
ರಾಮನವಮಿ ಕುರಿತಾದ ವಿಶೇಷ ಉಪನ್ಯಾಸವನ್ನು ಶ್ರೀ ನಿತಿನ್ ತಿವಾರಿ ವಕ್ತಾರರು ಸೈದಾಪುರ ನೀಡಿದರು.
ಪ್ರಭು ಶ್ರೀರಾಮರು ಪ್ರಪಂಚಕ್ಕೆ ನಾವು ಹೇಗೆ ಬದುಕನ್ನು ಸಾರ್ಥಕತೆ ಮಾಡಿಕೊಳ್ಳಬೇಕು ಎಂದು 16 ಆದರ್ಶ ಗುಣಗಳನ್ನು ತಿಳಿಸಿದ್ದಾರೆ, ಪಿತೃ ವಾಕ್ಯ ಪರಿಪಾಲಕನಾಗಿ, ಧರ್ಮ ರಕ್ಷಕನಾಗಿ, ಏಕ ಪತ್ನಿ ವ್ರತಸ್ತನಾಗಿ,ಒಳ್ಳೆಯ ಸಹೋದರಾನಾಗಿ, ಸಕಲ ಜೀವ ಜಲಚರಗಳಿಗೂ ಪರಿಪೂರ್ಣ ಆಡಳಿತ ಕೊಟ್ಟ ರಾಜನಾಗಿ, ಹೀಗೆ ಸಾಕಷ್ಟು ಗುಣಗಳನ್ನು ನಾವು ಸಹಿತ ಅವರ ಆದರ್ಶ ಜೀವನದಲ್ಲಿ ಅಳವಡಿಕೊಂಡಾಗ ಮಾತ್ರ ಜೀವನ ಸಾರ್ಥಕ ಎಂದು ಹೇಳಿದರು, ಹಾಗೆ ನಾಗರಿಕ ಸಮಾಜ ಪಂಚತತ್ವಗಳಾದ ಕುಟುಂಬ ಪ್ರಭೋದನ, ನಾಗರಿಕ ಕರ್ತವ್ಯ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಜಾಗರಣ ಕುರಿತಾಗಿ ಜಾಗೃತಿ ಮೂಡಿಸಿದರು.
ಹಿಂದೂ ಯುವ ಘರ್ಜನೆ ಕಾರ್ಯಕರ್ತರು ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಿದ್ದರು, ಕಾರ್ಯಕ್ರಮದಲ್ಲಿ ವೆಂಕಟೇಶ್ ಮುದಿರಾಜ, ರಮೇಶ್ ಹೂಗಾರ, ನರಸಪ್ಪ ಗಂಗನೊಳ, ಬನ್ನಪ್ಪ ಮುದಿರಾಜ್, ರಮೇಶ್ ಚೌವ್ಹಣ, ವೆಂಕಟ ಚಿಟಕೆನ ಪಲ್ಲಿ, ಶಂಕರ ನಾಗವೋಳ, ಹನಮಂತು ಮಜ್ಜಿಗೆ, ರಮೇಶ್ ಮನ್ನೇ, ಶ್ರೀಹರಿ, ಸಾಬಣ್ಣ, ಮುಕುಂದ , ನರಸಪ್ಪ ಯಾದವ್, ಭೀಮಶಂಕರ ಮಜ್ಜಿಗೆ, ಅಂಜಪ್ಪ ಮಜ್ಜಿಗೆ, ಅಂಜಪ್ಪ ನಾಗವೋಳ, ನರೇಶ್ ಬಜರಂಗಿ ಎಲ್ಲಾ ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ,ಸಾರ್ವಜನಿಕರು ಭಾಗವಹಿಸಿದ್ದರು.

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ