ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನ ಮನ ಗೆದ್ದ ಹನುಮ ಜಯಂತಿ, ಶೋಭಾಯಾತ್ರೆ

ಯಾದಗಿರಿ/ ಗುರುಮಠಕಲ್: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹನುಮಾನ್ ಜಯಂತಿಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುವುದು.

ಪಟ್ಟಣದ ಹನುಮಾನ ದೇವಸ್ಥಾನ ಸಮಿತಿ ವತಿಯಿಂದ ಬೆಳಿಗ್ಗೆಯಿಂದಲೇ ಪೂಜೆ ಪುನಸ್ಕಾಗಳು ಜರುಗಿದವು ನಂತರ ಪ್ರಸಾದ ವಿತರಿಸಲಾಯಿತು.

ಸಂಜೆ ವೇಳೆ ಹಿಂದೂ ಯುವ ಘರ್ಜನೆ ಸಮಿತಿ ವತಿಯಿಂದ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು, ಶೋಭಾಯಾತ್ರೆಯು ಅಂಬಿಗರ ಚೌಡಯ್ಯ ವೃತ್ತದಿಂದ ಪ್ರಾರಂಭವಾಗಿ ಡಿಜೆ ಮತ್ತು ಲೇಸರ್ ಲೈಟ್ ವಿನ್ಯಾಸದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜನಮನ ಸೆಳೆಯಿತು.

ಕಾರ್ಯಕ್ರಮವನ್ನು ಸಾಮೂಹಿಕ ಹನುಮಾನ ಚಾಲೀಸ ಪಠಣದ ಮಾಡುವ ಮೂಲಕ ಚಾಲನೆ ನೀಡಿ ಭಕ್ತರು ಹನುಮಂತನ ದೈವಿಕ ಅನುಗ್ರಹವನ್ನು ಆಚರಿಸಲು ಮತ್ತು ಸಂತೋಷ, ಸಮೃದ್ಧಿ, ಶಕ್ತಿ, ಧೈರ್ಯ ಮತ್ತು ರಕ್ಷಣೆಗಾಗಿ ಒಕ್ಕೊರಲಿನಿಂದ ಆಶೀರ್ವಾದ ಬೇಡಿದರು.

ಶೋಭಾಯಾತ್ರೆಯು ಮುಖ್ಯರಸ್ತೆಯಿಂದ ಸಿಹಿನೀರಿನ ಬಾವಿ, ನಗರೇಶ್ವರ ದೇವಸ್ಥಾನ, ಅಂಚೆ ಕಚೇರಿ, ಮಲ್ಲಯ್ಯನ ಕಟ್ಟಿ, ಮೂಲಕ ಆಂಜನೇಯ ದೇವಸ್ಥಾನ ತಲುಪಿತು. ಕಾರ್ಯಕ್ರಮದಲ್ಲಿ ಯುವಕರು ಮತ್ತು ಮಕ್ಕಳು ಕುಣಿದು ಕುಪ್ಪಳಿಸಿದರು ಸಾಕಷ್ಟು ಸಂಖ್ಯೆಯಲ್ಲಿ ಜನ ಸ್ತೋಮ ಸೇರಿ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತಂದುಕೊಟ್ಟರು.

ಈ ಸಂದರ್ಭದಲ್ಲಿ ಹನುಮಾನ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಹಿಂದೂ ಯುವ ಘರ್ಜನೆ ಸಮಿತಿ ಅಧ್ಯಕ್ಷ ವೆಂಕಟೇಶ್ ಮುದಿರಾಜ್, ಕಾಶಪ್ಪ ಮನ್ನೇ, ಸಾಬಣ್ಣ ಮನ್ನೇ, ರಮೇಶ್ ಹುಗಾರ , ಹಣಮಂತು,ನರಸಪ್ಪ ಗಂಗಾನೊಳ, ಬನ್ನಪ್ಪ,ರಮೇಶ್ ಮನ್ನೇ, ಶ್ರೀನಿವಾಸ ಯಾದವ್, ಹಿಂದೂ ಯುವ ಘರ್ಜನೆ ಸಮಿತಿ ಎಲ್ಲಾ ಕಾರ್ಯಕರ್ತರು,ಪಟ್ಟಣದ ಜನರು ಪಾಲ್ಗೊಂಡಿದ್ದರು.

ವರದಿ: ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ