ಕೊಪ್ಪಳ : ಜಿಲ್ಲೆಯ ಕುಕನೂರ ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕೆ ದೇವಿಯ ಮಠದಲ್ಲಿ ೨೮ ನೇ ವರ್ಷದ , ಶ್ರೀ ಕಲ್ಲಿನಾಥ ಕವಿಗಳು ದ್ಯಾಂಫೂರ ವಿರಚಿತ ಮಹಾ ಶಿವಶರಣೆ ಶ್ರೀ ಭೀಮಾಂಬಿಕ ದೇವಿಯ ಜಾತ್ರಾ ಮಹೋತ್ಸವ, ಪುರಾಣ ಮಹಾ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಏ.೨೮ ರಂದು ಸೋಮವಾರ ಬೆಳಿಗ್ಗೆ ೧೧.೩೦ ಗಂಟೆಗೆ ಜರುಗುವವು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳಾದ ಶಿರಟ್ಟಿಯ ಫಕೀರಸಿದ್ಧರಾಮ ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ, ಕುಕನೂರಿನ ಡಾ. ಮಹಾದೇವ ಸ್ವಾಮೀಜಿ, ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಬಳಗಾನೂರಿನ ಶಿವಶಾಂತವೀರ ಶರಣರು, ತಿಂಥಣಿಯ ಸಿದ್ದರಾಮಾನಂದಪುರಿ ಸ್ವಾಮೀಜಿ, ಇಟಗಿಯ ಷಣ್ಮುಖಪ್ಪಜ್ಜನವರು ಹಾಗೂ ಸುತ್ತಮುತ್ತಲಿನ ಪೂಜ್ಯರು ಸಾನಿದ್ಯ ವಹಿಸುವರು. ಕಾಟ್ರಳ್ಳಿಯ ಶಾಂತವೀರಯ್ಯ ಶಾಸ್ತ್ರಿ ಪುರಾಣ ಪ್ರವಚನ ನೀಡುವರು, ಸಂಗೀತ ಬಳಗದ ಗವಾಯಿಗಳಾದ ಕಲಬರ್ಗಿಯ ಕುಮಾರ ಶಶಿಧರ ಗವಾಯಿಗಳು , ಕುರಹಟ್ಟಿಯ ಬಸವರಾಜ ಹುಯಿಲಗೋಳ ಇವರು ಸಂಗೀತ ಸೇವೆ ನೀಡುವರು. ಮಂಡಲಗಿರಿಯ ಸದಾಶಿವಯ್ಯ ಹಿರೇಮಠ, ಕುಕನೂರಿನ ವಿರುಪಾಕ್ಷಯ್ಯ ಗುರುವಿನ, ಮಂಡಲಗಿರಿಯ ಶಿವಶರಣಯ್ಯ ಹಿರೇಮಠ, ಹಾಗೂ ಭಟಪನಹಳ್ಳಿಯ ಭಾವಿಕಟ್ಟಿ ಕಟ್ಟಿಮನಿಯವರು ಮಾಂಗಲ್ಯ ಕಾರ್ಯದಲ್ಲಿ ಭಾಗವಹಿಸುವರು. ಏ.೨೦ ರೊಳಗೆ ವಿವಾಹ ಮಾಡ ಬಯಸುವರು ಸಮಿತಿಯವರಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು, ಬಾಲ್ಯ ವಿವಾಹ ಮರು ವಿವಾಹಕ್ಕೆ ಅವಕಾಶ ಇರುವದಿಲ್ಲ, ಏ. ೧೨ ರಂದು ಶ್ರೀ ಭೀಮಾಂಬಿಕಾದೇವಿ ತೋಟ್ಟಿಲ ಕಾರ್ಯಕ್ರಮ ಜರುಗಿತು. ಈ ವೇಳೆ ಸಮಿತಿಯವರಾದ ಯಲ್ಲಪ್ಪ ದೇವರಳ್ಳಿ, ಪರಸಪ್ಪ ಹೊಸಮನಿ, ರಾಜಶೇಖರ ಕರಮುಡಿ, ಹಂಚ್ಯಾಲಪ್ಪ ಕಲ್ಗೋಡಿ, ವೀರಯ್ಯ ಭದ್ರಾಪೂರ, ಮಹೇಶ ದೊಡ್ಡಮನಿ, ಶರಣಪ್ಪ ಹಾದಿಮನಿ, ಮಲ್ಲಪ್ಪ ಗುಡಿಹಿಂದಲ, ಭೀಮಣ್ಣ ಉದ್ದಾರ, ಗವಿಸಿದ್ದಪ್ಪ ಭಾವಿಕಟ್ಟಿ, ಮುದಿಯಪ್ಪ ಪೂಜಾರ, ಚೆನ್ನಪ್ಪ ವಾಲಿಕಾರ ಸೇರಿದಂತೆ ಇತರರು ಇದ್ದರು. ಪ್ರತಿ ನಿತ್ಯ ಅಮ್ಮನ ಜೀವನ ಚರಿತ್ರೆ, ಪವಾಡಗಳ ಕಾರ್ಯಕ್ರಮ ಸಾಗಿಬಂದು ಏ.೨೮ ರಂದು ಸಂಜೆ ೫ ಗಂಟೆಗೆ ಶ್ರೀ ಭೀಮಾಂಬಿಕಾದೇವಿಯ ಲಘು ರಥೋತ್ಸವ ಜರುಗುವುದು. ರಾತ್ರಿ ೯.೩೦ ಗಂಟೆಗೆ ಸಾಮಾಜಿಕ ನಾಟಕ “ದಿಲ್ಲಿ ಹೊಕ್ಕ ಪುಂಡ ಹುಲಿ” ನಾಟಕವನ್ನು ಶ್ರೀ ಭೀಮಾಂಬಿಕಾ ನಾಟ್ಯ ಸಂಘದವರು ಅಭಿನಯಿಸುವರು ಎಂದು ಶ್ರೀ ಭೀಮಾಂಬಿಕಾ ದೇವಿಯ ಸರ್ವ ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.
- ಕರುನಾಡ ಕಂದ
