ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದೇಶ ಕಂಡ ಮಹಾನ್ ವ್ಯಕ್ತಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ : ಶಿಕ್ಷಕ ಗುರುಮೂರ್ತಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿಗ್ರಾಮ ವಾದಂತಹ ಟಿ ಕಲ್ಲಹಳ್ಳಿಯಲ್ಲಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ತುಂಬಾ ಸರಳತೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗುರುಮೂರ್ತಿ ಶಿಕ್ಷಕರು ಮಾತನಾಡುತ್ತಾ ದೇಶ ಕಂಡ ಮಹಾನ್ ವ್ಯಕ್ತಿ ಈ ದಲಿತ ಸೂರ್ಯ. ವಿಶ್ವರತ್ನ, ಮಹಾಜ್ಞಾನಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಇಂದು ಅವರು ಕೊಟ್ಟಿರುವಂತಹ ಸಂವಿಧಾನ ಭಾರತಕ್ಕೆ ಶ್ರೇಷ್ಠತೆ ತಂದು ಕೊಟ್ಟಿದೆ ಇವತ್ತು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ ಎಂದರೆ ಅದಕ್ಕೆ ಮಹತ್ವ ಕೊಟ್ಟಿದ್ದು ನಮ್ಮ ಬಾಬಾ ಸಾಹೇಬರು ಒಂದು ಹೆಣ್ಣು ಶಿಕ್ಷಣವಂತರಾಗಬೇಕೆಂದು,ತಪ್ಪು ಮಾಡಿದಾಗ ಕಾನೂನು ಸಚಿವ ಸ್ಥಾನದಿಂದಾನೆ ರಾಜೀನಾಮೆ ನೀಡಿ ಹೊರ ಬರುತ್ತಾರೆ ಅವರು ಕೊಟ್ಟಿರುವ ಸಂವಿಧಾನದಿಂದ ಇಂದು ಅದು ಸಾಧ್ಯವಾಗುತ್ತದೆ ಅದರ ಅಡಿಯಲ್ಲಿ ನಾವು ಜೀವನ ಸಾಗಿಸಲು ಸಹ ದಲಿತರಿಗೆ ಒಂದು ಅನುವು ಮಾಡಿಕೊಟ್ಟರು ಎಂದರು. ಗ್ರಾಮ ಸಹಾಯಕ ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ಅವರ ತತ್ವ ಆದರ್ಶಗಳನ್ನು ಈಗಿನ ಯುವಕರು ಮೈಗೂಡಿಸಿಕೊಂಡು ಅವರಂತೆ ಉನ್ನತ ಸ್ಥಾನದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಬೇಕು ಎಂದು ಆಶಿಸುತ್ತಾ ಇಂದು ಭೀಮ ಜಯಂತಿಯ ಶುಭಾಶಯಗಳು ತಿಳಿಸುತ್ತಾ ಸಂವಿಧಾನದ ಮಹತ್ವವನ್ನ ಅರಿತುಕೊಳ್ಳಿ ಬಾಬಾ ಸಾಹೇಬ್ ಅವರ ಆದರ್ಶಗಳು ನಮಗೆ ದಾರಿ ದೀಪವಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಊರಿನ ಮುಖಂಡರು ದಳಪತಿ ವೀರೇಶ್, ನಿರಂಜನ್ ಗೌಡ್ರು, ವಿಜಯ ಗೌಡ್ರು, ದಲಿತ ಮುಖಂಡರುಗಳಾದ ಡಿ ಬಸವರಾಜ್, ರುದ್ರಮುನಿ, ಗ್ರಾಮ ಸಹಾಯಕ ತಿಪ್ಪೇಸ್ವಾಮಿ, ಸಿದ್ದೇಶ್ ಬಿ, ಕೆಂಚಣ್ಣ, ಶಿಕ್ಷಕರು ಗುರುಮೂರ್ತಿ , ಸೇರಿದಂತೆ ಪ್ರಹ್ಲಾದ, ನಾಗರಾಜ್, ಅಡಿವೆಪ್ಪ, ಗಗನ್ ಹಾಗೂ ಗ್ರಾಮಸ್ಥರು ಸೇರಿದ್ದರು.

ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ