ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹದಗೆಟ್ಟ ರಸ್ತೆ ಅಧಿಕಾರಿಗಳ ನಿರ್ಲಕ್ಷ್ಯ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಿಂದ ಕೆಲವು ಗ್ರಾಮಗಳಿಗೆ ವಾಹನ ಸವಾರರು ತಲುಪಲು ರಸ್ತೆಗಳು ತಗ್ಗು ದಿನ್ನೆಗಳಿಂದ ತುಂಬಿ ತುಳುಕುತ್ತಿವೆ.
ಈ ರಸ್ತೆ ಕೊಟ್ಟೂರು ಪಟ್ಟಣದ ತುಂಗಭದ್ರ B.ED ಕಾಲೇಜ್ ಹತ್ತಿರದಿಂದ ಕೊಟ್ಟೂರು ತಾಲೂಕಿನ ಗ್ರಾಮಗಳಾದ ಜೋಳದ ಕೂಡ್ಲಿಗಿ , ಹನುಮನಹಳ್ಳಿ, ,ಮಡ್ರಳ್ಳಿ ,ಮಾರ್ಗವಾಗಿ ದಾವಣಗೆರೆ ತಲುಪುತ್ತದೆ. ಅದಲ್ಲದೆ ಸ್ಥಳೀಯ ವಾಹನಗಳು ಸೇರಿ ದಿನಕ್ಕೆ ಈ ರಸ್ತೆಯಲ್ಲಿ 500 ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ.
ಎಷ್ಟೋ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ ಮಳೆ ಬಂದರಂತೆ ಜನರು ಹರಸಾಹಸ ಪಟ್ಟು ಓಡಾಡುವ ಪರಿಸ್ಥಿತಿಯಾಗಿದ್ದರೂ ಇತ್ತ ಕಡೆ PWD ಇಲಾಖೆಯವರು ಗಮನ ಹರಿಸದಿರುವುದು ಒಂದು ದೊಡ್ಡ ದುರಂತ.
ಇನ್ನು ಮುಂದಾದರೂ ಸಂಬಂಧಿಸಿದ ಇಲಾಖೆಯವರು ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಿ ವಾಹನ ಸವಾರರು ಓಡಾಡಲು ಅನುಕೂಲವಾಗುವ ರಸ್ತೆಯನ್ನಾಗಿ ನಿರ್ಮಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್. ಭರ್ಮಣ್ಣ ಹಾಗು ಗ್ರಾಮ ಪಂಚಾಯಿತಿ ಸದಸ್ಯರಾದ ಮಂಗನಹಳ್ಳಿ ಸೋಮಶೇಖರ್ ರವರು ಮಾದ್ಯಮದವರ ಜೊತೆಗೆ ಮಾತನಾಡಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ PWD ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ದುರ್ಗದಾಸ್, ಹಾಲೇಶಿ, ಮಂಗನಹಳ್ಳಿ, ಜೋಳದ ಕೂಡ್ಲಿಗಿ, ನಾಗರಕಟ್ಟಿ ಗ್ರಾಮಗಳ ಗ್ರಾಮಸ್ಥರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ