ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ತಾರಾಪುರ ಗ್ರಾಮದ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಂಸ್ಥಾನ ಹಿರೇಮಠದ ಶ್ರೀ ಷ. ಬ್ರ. ಮುರುಗರಾಜೇಂದ್ರ ಶಿವಾಚಾರ್ಯ ಪುಣ್ಯಸ್ಮರಣೋತ್ಸವ ಹಾಗೂ ತಾರಕೇಶ್ವರ ಲಿಂಗ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಮಹಾಪುರಾಣ ದಿ. 16 4 2025 ರಿಂದ 30 4 2025 ರವರೆಗೆ ಪ್ರತಿ ನಿತ್ಯ ಮಹಾದಾಸೋಹಿ ಶ್ರೀ ಕಲಬುರಗಿ ಶರಣಬಸವೇಶ್ವರ ಮಹಾಪುರಾಣವು ದಿ. 16 4 2025 ರಂದು ಪುರಾಣ ಪ್ರಾರಂಭಗೊಂಡಿತು ಖ್ಯಾತ ಪ್ರವಚನಕಾರರದ ಪೂಜ್ಯ ಶ್ರೀ ಡಾ. ವಿವೇಕಾನಂದ ದೇವರು ಕಲ್ಯಾಣ ಹಿರೇಮಠ ಸಾಕಿನ ಗುಣದಾಳ ಇವರ ಅಮೃತವಾಣಿಯಿಂದ ಪ್ರತಿನಿತ್ಯವೂ ಪುರಾಣ ನಡೆಯುವುದು. ಸಂಗೀತ ಸೇವೆ ಗಾನ ಕೋಗಿಲೆ ಶ್ರೀ ಶಿವರಾಜ್ ಗವಾಯಿಗಳು ಚೌಡಾಪುರ ಹಾಗೂ ತಬಲಾ ಶ್ರೀ ಮಲ್ಲಿಕಾರ್ಜುನ್ ಸಾಕಿನ್ ಆಳಂದ್ ಇವರ ಸಂಗೀತ ಸಂಯೋಜನೆಯಲ್ಲಿ ಜರಗುವುದು.
ಈ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಷ, ಬ್ರ, ಗುರುಲಿಂಗ ಶಿವಾಚಾರ್ಯರು ಸಂಸ್ಥಾನ ಹಿರೇಮಠ ತಾರಾಪುರ, ಅಧ್ಯಕ್ಷತೆಯನ್ನು ಕೇದಾರನಾಥ್ ಕತ್ತಿ ಪಿಕೆಪಿಎಸ್ ಅಧ್ಯಕ್ಷರು ಕಡಣಿ ವಹಿಸಿದರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದವರು ಶ್ರೀ ಬಸಲಿಂಗಪ್ಪ ಕತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರು ಕಡಣಿ, ಭೂಮಿ ಪೂಜೆ ಶ್ರೀ ಅಣವೀರಸಾಹುಕಾರ ಕತ್ತಿ, ಫೋಟೋ ಪೂಜೆ ಗುರುಲಿಂಗಪ್ಪಗೌಡ ಪಾಟೀಲ್ ಶಿಕ್ಷಕರು, ಅತಿಥಿಗಳು ಶರಣಗೌಡ ಪಾಟೀಲ್ ಪಿಕೆಪಿಎಸ್ ನಿರ್ದೇಶಕರು, ಮಡಿವಾಳಪ್ಪ ಜೇರಟಗಿ ಪಿಕೆಪಿಎಸ್ ನಿರ್ದೇಶಕರು, ರಮೇಶ್ ಕಿಣಗಿ ಗ್ರಾಮ ಪಂಚಾಯತಿ ಸದಸ್ಯರು, ಸಂತೋಷ್ ಬಿರಾದಾರ ಗ್ರಾಮ ಪಂಚಾಯತ್ ಸದಸ್ಯರು, ನೀಲಕಂಠ ವಡ್ಡರ, ಗ್ರಾಮ ಪಂಚಾಯತ್ ಸದಸ್ಯರು,ರಾಚು ಕಳಸಗೊಂಡ. ತಾರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ತಾರಕೇಶ್ವರರ ಭಕ್ತಾದಿಗಳು ಭಾಗಿಯಾಗಿದ್ದರು.
ವರದಿ. ಹಣಮಂತ ಚ. ಕಟಬರ್
