ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಂದು ಶಿವದ್ವೈತ ಶಿವಶರಣ ವಿರುಪಣ್ಣ ತಾತನವರ ಮಹಾ ರಥೋತ್ಸವ

ಬಳ್ಳಾರಿ / ಕಂಪ್ಲಿ : ನಗರದ ಶಿವದ್ವೈತ ಶ್ರೀ ಹೇರೂರು ವಿರುಪಣ್ಣ ತಾತನ ರಥೋತ್ಸವ ಇಂದು 18 ನೇ ಏಪ್ರಿಲ್ ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಜರಗಲಿದೆ.
ಶ್ರೀ ವಿರುಪಣ್ಣ ತಾತನವರು ಗಂಗಾವತಿ ತಾಲೂಕಿನ ಹೇರೂರು ಗ್ರಾಮದಲ್ಲಿ ಕ್ರಿ. ಶ. ರಲ್ಲಿ ಆಧ್ಯಾತ್ಮ ಸಾಧನೆಗಾಗಿ ನಾನಾ ಕಡೆ ಸಂಚರಿಸಿ ಬಳಿಕ ಕಂಪ್ಲಿಯಲ್ಲಿ ನೆಲೆಸಿ ಅನೇಕ ಜನರಿಗೆ ಅವರ ಭಕ್ತಿಗೆ ಅನುಸಾರವಾಗಿ ಆಶೀರ್ವಾದ ಮಾಡಿದ್ದಾರೆ.
ತಾತನವರ ಜಾತ್ರೆಗೆ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಅನೇಕ ಗ್ರಾಮಗಳ ಭಕ್ತರು ಆಗಮಿಸಿ ತಾತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಕರಿಸಿದ್ದೇಶ್ವರ ಸಂಸ್ಥಾನ ಮಠ
ಬುಕ್ಕಸಾಗರದ ಶ್ರೀ ಷ|| ಬ್ರ || ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹೆಬ್ಬಾಳದ ಬ್ರಹನ್ಮಮಠದ ಶ್ರೀ ಷ||ಬ್ರ||ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮ|| ನಿ|| ಪ್ರ|| ಪ್ರಭುಸ್ವಾಮಿಗಳವರು ಕಲ್ಮಠ ಕಂಪ್ಲಿ, ಹರ – ಗುರು- ಚರಮೂರ್ತಿಗಳು ಹಾಗೂ ಸರ್ವ ಸದಸ್ಯರು ಹಾಗೂ ಸಮಸ್ತ ಬಾಂಧವರ ಶ್ರೀ ವಿರೂಪಣ್ಣ ತಾತನ ಮಠದ ಅಧ್ಯಕ್ಷರಾದ ಡಿ.ವಿ. ರಮೇಶ, ದಾನಿಗಳು ಮತ್ತು ಭಕ್ತಾದಿಗಳು ಇವರ ಸಮ್ಮುಖದಲ್ಲಿ ಸಕಲ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ವಿರೂಪಣ್ಣ ತಾತನವರ ಸದ್ಭಕ್ತ ಸೇವಾ ಸಂಘ ತಿಳಿಸಿದೆ.

ವರದಿ : ಜಿಲಾನಸಾಬ್ ಬಡಿಗೇರ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ