ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೇಸಿಗೆ ಅವಧಿಯಲ್ಲಿ ಮನರೇಗಾ ಕೂಲಿಕಾರರಿಗೆ ಕೆಲಸದ ಪ್ರಮಾಣದಲ್ಲಿ 30% ರಿಯಾಯಿತಿ ನೀಡಿದೆ – ವಿಜಯ ಪಾಟೀಲ

ಬೆಳಗಾವಿ/ ಬೈಲಹೊಂಗಲ :
ಉದ್ಯೋಗ ಖಾತ್ರಿ ಕೂಲಿಕಾರರಿಗೆ ಪ್ರತಿಶತ 30% ರಷ್ಟು ರಿಯಾಯಿತಿಯನ್ನು ನರೇಗಾ ಯೋಜನೆ ಒದಗಿಸಿಕೊಟ್ಟಿದೆ ಎಂದು ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ) ವಿಜಯ ಪಾಟೀಲ ರವರು ಇಂದು ಗ್ರಾಮ ಪಂಚಾಯತ ಹಣಬರಹಟ್ಟಿ ಮತ್ತು ಮಲ್ಲಾಪೂರ ಕೆ ಎನ್‌ ವ್ಯಾಪ್ತಿಯ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೂಲಿಕಾರರಿಗೆ ಬೇಸಿಗೆ ಅವಧಿಯಲ್ಲಿ ಎಪ್ರೀಲ್‌, ಮೇ ಮಾಹೆಯಲ್ಲಿ ಕೆಲಸದ ಪ್ರಮಾಣದಲ್ಲಿ ಪ್ರತಿಶತ 30% ರಷ್ಟು ರಿಯಾಯಿತಿಯನ್ನು ಒದಗಿಸಿ ಕೊಟ್ಟಿದೆ ಮತ್ತು ಕೆಲಸದ ಅವಧಿಯಲ್ಲಿಯೂ ಸಹ ಕೂಲಿಕಾರರಿಗೆ ಬದಲಾವಣೆ ಮಾಡಿದೆ ಮುಂಜಾನೆ- 07 ರಿಂದ 01:00 ಗಂಟೆಯೊಳಗಾಗಿ ಎರಡು ಹಂತದ NMMs ಹಾಜರಾತಿಯನ್ನು ಪಡೆದುಕೊಂಡು ನಿಗಧಿ ಪಡಿಸಿರುವ ಅಳತೆ ಪ್ರಮಾಣದಷ್ಟು ಕೆಲಸವನ್ನು ಮಾಡುವಂತೆ ಕರೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಅತಿಯಾದ ತಾಪಮಾನ ಇರುವುದರಿಂದ ಎಲ್ಲಾ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಕ್ಯಾನ್‌ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಕೂಲಿಕಾರರಿಗೆ ಒದಗಿಸಬೇಕು ಹಾಗೂ ಮೇ ತಿಂಗಳಲ್ಲಿ ಎಲ್ಲಾ ಕೂಲಿಕಾರರಿಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಕೂಲಿಕಾರರಿಗೆ ತಿಳಿಸಿದರು.
ತಾ.ಪಂ ಐಇಸಿ ಸಂಯೋಜಕರು ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿಶೇಷ ಚೇತನರಿಗೆ ವಿಶೇಷ ಜಾಬಕಾರ್ಡಗಳನ್ನು ನೀಡಲಾಗಿದೆ ಇದರಿಂದ ವಿಶೇಷ ಚೇತನರಿಗೆ ಪ್ರತೇಕವಾಗಿ 100 ದಿವಸ್‌ ಕೆಲಸ ದೊರೆಯುತ್ತದೆ ಮತ್ತು ಕೆಲಸದ ಪ್ರಮಾಣದಲ್ಲಿ ವಿಶೇಷ ಚೇತನರಿಗೆ 50% ರಷ್ಟು ರಿಯಾಯಿತಿ ಇರುತ್ತದೆ ಅದೇ ರೀತಿಯಾಗಿ ವಯೋವೃದ್ಧರಿಗೂ ಸಹ ಕೆಲಸದಲ್ಲಿ ರಿಯಾಯಿತಿ ಇರುತ್ತದೆ ಎಂದು ಇದೇ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ 04 ಜನ ವಿಶೇಷ ಚೇತನರಿಗೆ ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ತಾ.ಪಂ ಐಇಸಿ ಸಂಯೋಜಕ, ಎಸ್‌ ವ್ಹಿ ಹಿರೇಮಠ ಗ್ರಾಪಂ ಕಾರ್ಯದರ್ಶಿ, ಎಸ್‌ ವ್ಹಿ ಗಡ್ಡಿ, ಗ್ರಾ.ಪಂ ಬೇರಪೂಟ ಟೆಕ್ನಿಷಿಯನ್ , ಸಿದ್ರಾಮಯ್ಯ ಹಿರೇಮಠ ಗ್ರಾಮ ಕಾಯಕ ಮಿತ್ರ, ಲಕ್ಷ್ಮೀ ಮಾಶ್ಯಾಗೋಳ, ಅನಸೂಯಾ ಸಣ್ಣಮಲ್ಲಯ್ಯನವರ ಮೇಟ್‌ ಚಂದ್ರಪ್ಪ ಕೊಳದೂರ ಹಾಗೂ ಕೂಲಿಕಾರರು ಹಾಜರಿದ್ದರು.

ವರದಿ. ಭೀಮಸೇನ ಕಮ್ಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ