ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದೇವಸಮುದ್ರ ಗ್ರಾಮದಲ್ಲಿ ಶ್ರೀ ತುರಮುಂದಿ ಬಸವೇಶ್ವರರ ಮಹಾರಥೋತ್ಸವ

ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಗ್ರಾಮದ ಆರಾಧ್ಯದೇವರಾದ ಶ್ರೀ ತುರಮುಂದಿ ಬಸವೇಶ್ವರರ ಎಂಟನೇ ವರ್ಷದ ಮಹಾರಥೋತ್ಸವವು ಇಂದು ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮಹಾರಥೋತ್ಸವದ ಅಂಗವಾಗಿ ಚಿಕ್ಕೇಬಕೊಪ್ಪ ಶಿವಶಾಂತವೀರ ಶರಣರ ತುಲಾಭಾರ ಹಾಗೂ ಆರ್ಶೀವಚನ ಮತ್ತು ಕಳಸ ಕುಂಭಗಳೊಂದಿಗೆ ಗಂಗೆಸ್ಥಳ ಕಾರ್ಯಕಾರ್ಯಕ್ರಮ ವೀರಗಾಸೆ ಕಲಾವಿದರೊಂದಿಗೆ ಜರುಗಿತು. ನಂತರ ತುರಮುಂದಿ ಬಸವೇಶ್ವರ ಮತ್ತು ನೀಲಮ್ಮ ತಾಯಿಯ ಕಲ್ಯಾಣೋತ್ಸವ ಸಮಾರಂಭ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ತುರಮುಂದಿ ಬಸವೇಶ್ವರರ ಶಿಲಾಮೂರ್ತಿಗೆ ವಿವಿಧ ಅಭಿಷೇಕಗಳು, ನೈವೇದ್ಯ ಸಮರ್ಪಣೆ ಮತ್ತು ಮಹಾಮಂಗಳಾರತಿಯ ನಂತರ ಮಡಿ ತೇರನ್ನು ಎಳೆಯಲಾಯಿತು ಸಂಜೆ ವಿವಿಧ ಜಾನಪದ ಕಲಾತಂಡಗಳು, ಮಂಗಖವಾದ್ಯಗಳೊಂದಿಗೆ ರಥದಲ್ಲಿ ತುರಮುಂದಿ ಬಸವೇಶ್ವರ ಮತ್ತು ನೀಲಮ್ಮನವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ರಥವು ಗ್ರಾಮದ ರಾಜಬೀದಿಯಲ್ಲಿ ಸಾಗಿ ಎದರು ಬಸವಣ್ಣನ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಪುನಃ ದೇವಸ್ಥಾನಕ್ಕೆ ತಲುಪಿತು.
ಮಹಾರಥೋತ್ಸವದಲ್ಲಿ ಗ್ರಾಮದ ಮುಖಂಡರಾದ ಜಿ.ಲಿಂಗನಗೌಡ, ಅಳ್ಳಳ್ಳಿ ವೀರೇಶ್, ಜಿ.ಚಂದ್ರಶೇಖರಗೌಡ, ಜಿ.ಮಲ್ಲಿಗೌಡ,ಗುಡ್ಡದ ಪಂಪಣ್ಣ, ಜಿ.ವೀರನಗೌಡ, ಜಿ.ಗಣೇಶಗೌಡ, ತುರುಮುಂದಿ ಬಸವೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಗ್ರಾಮದ ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.
ರಾತ್ರಿ ಗ್ರಾಮದ ಕಲಾವಿದರಿಂದ ಶ್ರೀಕೃಷ್ಣ ಲೀಲೆ ಎನ್ನುವ ಬಯಲಾಟ ಪ್ರದರ್ಶನಗೊಂಡಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ