ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಡಗರದಿಂದ ಜರುಗಿದ ಕಿರಸೂರಿನ ಗೌರಿಶಂಕರ ರಥೋತ್ಸವ

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಕಿರಸೂರ ಗ್ರಾಮದ ಲಿಂ. ಶ್ರೀ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆಯ ನಿಮಿತ್ಯ ನಡೆದ ಜಾತ್ರಾ ಮಹಾರಥೋತ್ಸವವು ಕಿರಸೂರನಲ್ಲಿ ಅದ್ದೂರಿಯಾಗಿ ಜರುಗಿತು.
ಮುಂಜಾನೆ ೬ ಗಂಟೆಗೆ ಗೌರಿಶಂಕರ ಕೃರ್ತೃ ಗದ್ದಿಗೆಗೆ ಮಹಾರುದ್ರಾಭಿಷೇಕ, ಸಕಲವಾದ್ಯ ಮೇಳದೊಂದಿಗೆ ಪಾಲಿಕೆ ಉತ್ಸವ ಕಳಸದ ಮೆರವಣಿಗೆಯು ಸುಮಂಗಲಿಯರಿ೦ದ ಕುಂಭಮೇಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಮಠಕ್ಕೆ ತಲುಪಿತು.
ಪುಣ್ಯ ಸ್ಮರಣೆಯ ನಿಮಿತ್ಯ ಶ್ರೀಮಠದ ಲಿಂ. ಗೌರಿಶಂಕರ ಮಹಾಸ್ವಾಮಿಗಳು ತಮ್ಮ ಜೀವಂತ ಅವಧಿಯಲ್ಲಿ ಪ್ರಾರಂಭವಾಗಿದ್ದ ಐದು ದಿವಸದ ಜಪಯಜ್ಷ ಕಾರ್ಯಕ್ರಮವನ್ನು ಅವರ ಶಿಷ್ಯ ಬಳಗದಿಂದ ಪ್ರಾರಂಭಗೊಡಿದ್ದ ಕಾರ್ಯಕ್ರಮವನ್ನು ಗುಳೇದಗುಡ್ಡದ ಮರಡಿ ಮಠದ ಅಭಿನವ ಕಾಡಸಿದ್ದೇಶ್ವರ ಮರುಳಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಮುಂಜಾನೆ ೧೦.೦೦ ಘಂಟೆಗೆ ಮಂಗಲಗೊಳಿಸಿದರು. ಸಾಯಂಕಾಲ ಜರುಗಿದ ಮಹಾರಥೋತ್ಸವಕ್ಕೆ ಮನ್ನಿಕಟ್ಟಿ ಗ್ರಾಮದ ಸದ್ಭಕ್ತರಿಂದ ತೇರಿನ ಕಳಸ, ಮುಗಳೊಳ್ಳಿ ಗ್ರಾಮದ ಸದ್ಭಕ್ತರಿಂದ ತೇರಿನ ಹಗ್ಗ, ಬಾದಾಮಿ ತಾಲೂಕಿನ ಸುಳ್ಳ ಮತ್ತು ಮುದೇನೂರ ಗ್ರಾಮದ ಸದ್ಭಕ್ತರಿಂದ ನಂದಿಕೋಲು ಹಾಗೂ ತೇರಿನ ರುದ್ರಾಕ್ಷಿಮಾಲೆ ಭಗವತಿ ಗ್ರಾಮದ ಸದ್ಭಕ್ತರಿಂದ ಬಾಳೆ ಕಂಬ ಮೆರವಣಿಗೆ ಮೂಲಕ ತಲುಪಿದ ನಂತರ ಗುಳ್ಳೇದಗುಡ್ಡ ಗ್ರಾಮದ ದಾನಿಗಳಾದ ಸದಾಶಿವಯ್ಯ ಎಸ್. ವಸ್ತ್ರದ ಅವರು ನಿರ್ಮಿಸಿ ಕೊಟ್ಟಿರುವ ಭವ್ಯವಾದ ರಥವನ್ನು ಪ್ರತೀ ವರ್ಷದಂತೆ 13ನೇ ವರ್ಷದ ರಥೋತ್ಸವವನ್ನು ಮುತ್ತತ್ತಿ ಗುರುಲಿಂಗ ಶಿವಾಚಾರ್ಯರು ಬಿಲ್ ಕೆರೂರಿನ ಸಿದ್ದಲಿಂಗ ಶಿವಾಚಾರ್ಯರು ಇಟಗಿ ಗುರು ಶಾಂತವೀರ ಶಿವಾಚಾರ್ಯರು ಪ್ರವಚನಕಾರರಾದ ಸೌದತ್ತಿ ತಾಲೂಕಿನ ಕಗದಾಳ ಗ್ರಾಮದ ವೀರಭದ್ರ ಸ್ವಾಮಿಗಳು ಶ್ರೀಮಠದ ಅರ್ಚಕ ಸಂಗಯ್ಯ ಹಿರೇಮಠ ಶ್ರೀಮಠದ ಟ್ರಸ್ಟ್ ಕಮಿಟಿಯ ಅಧ್ಯಕ್ಷ ನಾಗಪ್ಪ ಮೇಟಿ ಕಾರ್ಯದರ್ಶಿ ಷಣ್ಮುಖ ಅಂಗಡಿ ಗ್ರಾಮದ ಮುಖಂಡರಾದ ಬಸವರಾಜ ಆನಗವಾಡಿ ಶಿವಾನಂದ ಮಲ್ಲಾಪುರ ಬಸವರಾಜ ಡುಗ್ಗಿ ಹುಚ್ಚಪ್ಪ ವಾಗಿನಗೇರಿ ದುಂಡಯ್ಯ ಅಳದೂರು ಮಠ ರಂಗಪ್ಪ ಕೆಲುಡಿ ರಂಗಪ್ಪ ಕಟಗಿ ಶ್ರೀಮತಿ ಅಶ್ವಿನಿ ಪೂಜಾರಿ ಗ್ರಾಮದ ಪ್ರಮುಖರು ಸಾಂಕೇತಿಕವಾಗಿ ಚಾಲನೆ ನೀಡಿದರು. ನಂತರ ಸಾವಿರಾರು ಭಕ್ತರು ಹಗ್ಗ ಎಳೆಯುವದರ ಮೂಲಕ ಸಡಗರ ಸಂಭ್ರಮದಿಂದ ವಿವಿಧ ವಾದ್ಯ ಮೇಳದೊಂದಿಗೆ ಮಹಾ ರಥೋತ್ಸವ ಜರುಗಿತು.

ಶ್ರೀಮಠಕ್ಕೆ ಭಕ್ತರ ದಂಡು ಪುಣ್ಯ ಸ್ಮರಣೀಯ ನಿಮಿತ್ಯ ದರ್ಶನ ಪಡೆದು ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು. ನಂತರ ಕಮಿಟಿ ಅವರಿಂದ ಸನ್ಮಾನ ಸ್ವೀಕರಿಸಿ , ಮಾತನಾಡಿದ ಅವರು ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಶ್ರೀಗಳು ನಡೆದಾಡಿದ ಈ ಸ್ಥಳ ಅವರ ಮಾತುಗಳು ಇಂದಿಗೂ ಪ್ರಚಲಿತದಲ್ಲಿವೆ ಶ್ರೀಗಳು ಆಯುರ್ವೇದಿಕ್ ವೈದ್ಯರಾಗಿದ್ದಾರೆ ಅವರು ಹಲವಾರು ಭಕ್ತರ ರೋಗಗಳನ್ನು ಕಳೆದಿದ್ದಾರೆ.
ರಥೋತ್ಸವದಲ್ಲಿಕಿರಸೂರ ಮುದೇನೂರು ಬಾದಾಮಿ ತಾಲೂಕಿನ ಸುಳ್ಳ ಮುಗುಳುಳ್ಳಿ ಭಗವತಿ ಹಳ್ಳೂರ್ ಬೇವೂರ್ ಹೊನ್ನ ಕಟ್ಟಿ ಮನ್ನಿಕಟ್ಟೆ ಬಾಗಲಕೋಟ್ ಗುಳೇದಗುಡ್ಡ ಗದಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು, ಪಾಲ್ಗೊಂಡಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ