ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊನೆಯಿಂದ ಎರಡು ಸ್ಥಾನ ಮೇಲಕ್ಕೇರಿದ ಎಸ್.ಎಸ್. ಎಲ್. ಸಿ ಫಲಿತಾಂಶ

33ನೇ ಸ್ಥಾನಕ್ಕೆ ತೃಪ್ತಿಗೊಂಡ ಯಾದಗಿರಿ ಜಿಲ್ಲೆ ಫಲಿತಾಂಶ

ಯಾದಗಿರಿ: ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ, KSEAB 2025ರ ಕರ್ನಾಟಕ SSLC ಫಲಿತಾಂಶ ಅನ್ನು ಬಿಡುಗಡೆ ಮಾಡಿದ್ದು, ಪ್ರತಿ ಬಾರಿಯಂತೆ ಈ ಬಾರಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಕಾಯ್ದುಕೊಳ್ಳದೆ ಎರಡು ಸ್ಥಾನ ಪಲ್ಲಟಗೊಂಡು ಚೇತರಿಕೆ ಕಂಡಿದೆ.

ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲಾಯಿತು. ಪ್ರಸಕ್ತ 2025ನೇಯ ವರ್ಷ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದು, ಉತ್ತೀರ್ಣ ಶೇಕಡಾವಾರು 62.34% ಆಗಿದೆ, ಕಳೆದ ವರ್ಷದ ಉತ್ತೀರ್ಣ ದರವಾದ 53% ಕ್ಕಿಂತ ಈ ಬಾರಿ 9% ಹೆಚ್ಚಳವಾಗಿದೆ. ಹೆಚ್ಚುವರಿಯಾಗಿ, 22 ವಿದ್ಯಾರ್ಥಿಗಳು 625/625 ರ ಪರಿಪೂರ್ಣ ಅಂಕಗಳನ್ನು ಗಳಿಸಿದ್ದಾರೆ.

ಪ್ರತಿಬಾರಿ ಎಸ್. ಎಸ್. ಎಲ್. ಸಿ ಆಗಿರಲಿ ಪಿ. ಯು. ಸಿ ಆಗಲಿ ಫಲಿತಾಂಶ ಬಂದ್ರೆ ಮೇಲಿಂದ ಅಲ್ಲಾ ನಾವು ಫಲಿತಾಂಶ ಕೆಲಗಡೆಯಿಂದ ಯಾವ ಸ್ಥಾನದಲ್ಲಿ ಇದೀವಿ ಅನ್ನೋದೇ ವಾಸ್ತವ. ಈ ಬಾರಿ ಯಾದಗಿರಿ ಜಿಲ್ಲಾ ಉಪ ನಿರ್ದೇಶಕರಾದ ಚನ್ನಬಸಪ್ಪ ಮುಧೋಳ ಅವರ ಸತತ ಪ್ರಯತ್ನದಿಂದ ಹಾಗೂ ಜಿಲ್ಲೆಯ ಎಲ್ಲಾ ಮುಖ್ಯ ಗುರುಗಳ ಪರಿಶ್ರಮದಿಂದ ಯಾದಗಿರಿ ಜಿಲ್ಲೆ ಎಸ್ ಎಲ್ ಸಿ ಫಲಿತಾಂಶ 2 ಸ್ಥಾನ ಸುಧಾರಣೆ ಕಂಡಿದೆ ಎಂದು ಸಂತಸ ವ್ಯಕ್ತಪಡಿಸಿದ ತಾಲೂಕ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಆಗಿರುವ ರವೀಂದ್ರ ಚೌಹಾಣ್ ರವರು ಮಾನ್ಯ ಉಪ ನಿರ್ದೇಶಕರಿಗೆ ಸಿಹಿ ಹಂಚಿ ಇನ್ನೂ ಹೆಚ್ಚಿನ ಪರಿಶ್ರಮದ ಅಗತ್ಯವಿದೆ ಮುಂಬರುವ ವರ್ಷಗಳಲ್ಲಿ ಇನ್ನೂ ಉತ್ತಮ ಫಲಿತಾಂಶ ಕೊಡುವ ನಿರೀಕ್ಷೆ ನಮ್ಮದು ಎಂದು ತಿಳಿಸಿದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ