
ಚಾಮರಾಜನಗರ/ ಹನೂರು: ಮೇ 5ರಿಂದ ಆರಂಭವಾಗಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಬಲಗೈ ಸಮುದಾಯದವರು ಹೊಲೆಯಾ ಎಂದು ಮತ್ತು ಎಡಗೈ ಸಮುದಾಯದವರು ತಮ್ಮನ್ನು ಮಾದಿಗ ಎಂದು ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನೆಯ ಸಂಚಾಲಕ ನಂಜುಂಡ ಮೌರ್ಯ ತಿಳಿಸಿದ್ದಾರೆ.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ
ಮನೆ ಮನೆಗೆ ಬರುವ ಗಣತಿದಾರರಿಗೆ ನಿಖರ ಮಾಹಿತಿ ನೀಡುವುದು ಪ್ರತಿ ಕುಟುಂಬದ ಜವಾಬ್ದಾರಿಯಾಗಿದೆ.
ಈ ಕೆಲಸವನ್ನು ಯಾರೂ ನಿರ್ಲಕ್ಷ್ಯ ಮಾಡದೆ, ಮನೆಯ ಬಳಿ ಗಣತಿದಾರರು ಬರುವ ಮೊದಲು ಅಗತ್ಯ ದಾಖಲೆಗಳನ್ನು ಒಂದು ಕಡೆ ಸಂಗ್ರಹಿಸಿ, ಸರಿಯಾದ ವಿವರಗಳನ್ನು ನೀಡಬೇಕು,” ಎಂದು ಬಲಗೈ ಮತ್ತು ಎಡಗೈ ಸಮುದಾಯದವರಲ್ಲಿ ಮನವಿ ಮಾಡಿದರು.
ವಿಶ್ವಜ್ಞಾನಿ ಟ್ರಸ್ಟ್ ಅಧ್ಯಕ್ಷರಾದ ತಳ ಶಾಸನ ಮೋಹನ್ ರವರು ಮಾತನಾಡಿಈ ಸಮೀಕ್ಷಾ ಕಾರ್ಯ ಎಡಗೈ ಮತ್ತು ಬಲಗೈ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದ್ದು, ಮನೆ ಮನೆಗೆ ಗಣತಿ ಸಮೀಕ್ಷೆಗೆ ಅಧಿಕಾರಿಗಳು ಬಂದ ಸಂದರ್ಭದಲ್ಲಿ ಗ್ರಾಮದ ಮುಖಂಡರು ಯುವಕರು ಯುವತಿಯರು ಅವರನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಸರ್ಕಾರದ ಜೊತೆಗೆ ಕೈಜೋಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ರಮೇಶ್ ಬೊಮ್ಮನಗದ್ದೆ, ಪಳನಿಸ್ವಾಮಿ ಶ್ರೀರಂಗಪಟ್ಟಣ, ವೀರನ್ ಒಡಕೆ ಹಳ್ಳ, ಮಂಜುಳಾ ಸಂಪಿಗಾ ಹಾಜರಿದ್ದರು.
ವರದಿ ಉಸ್ಮಾನ್ ಖಾನ್.
