ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಸ್ತೆಗೆ ಟ್ರ‍್ಯಾಕ್ಟರ್ ವೀಲ್ ಹಾಕದಂತೆ ಶಾಸಕ ಗಣೇಶ ರೈತರಲ್ಲಿ ಮನವಿ

ಕಂಪ್ಲಿ:ಮೇ.12. ಕ್ಷೇತ್ರದಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿಯಾಗಿದ್ದು, ಡಾಂಬರ್ ರಸ್ತೆಯಲ್ಲಿ ಟ್ರ‍್ಯಾಕ್ಟರ್ ಕಬ್ಬಣದ ವೀಲ್ ಹಾಕುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ಇದರಿಂದ ಕೋಟ್ಯಾಂತರ ಅನುದಾನ ವ್ಯರ್ಥವಾಗುವಂತಾಗಿದೆ. ಆದ್ದರಿಂದ ರೈತರು ಗಮನಹರಿಸಿ, ರಸ್ತೆ ಮೇಲೆ ವೀಲ್ ಹಾಕುವುದು ಬಿಡಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಸುಮಾರು 490 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ದೇವಸಮುದ್ರ-ಚಿಕ್ಕಜಾಯಿಗನೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಒಂದು ಅನುದಾನ ತರಲು, ಒಂದೆರಡು ವರ್ಷ ಬೇಕು. ಅಭಿವೃದ್ಧಿಗಾಗಿ ಕಷ್ಟಪಟ್ಟು ಅನುದಾನ ತಂದು, ರಸ್ತೆಗಳನ್ನು ಮಾಡಲಾಗುತ್ತಿದೆ. ಇಂತದರಲ್ಲಿ ರೈತರು ವೀಲ್ ಹಾಕುವುದರಿಂದ ರಸ್ತೆಗಳು ಹಾಳಾಗುತ್ತವೆ. ಹೊಸ ರಸ್ತೆಗಳು ವೀಲ್ ಹಾಕುವುದರಿಂದ ಬಾಳಿಕೆ ಬರುವುದಿಲ್ಲ. ಆದ್ದರಿಂದ ರೈತರು ಜಾಗೃತರಾಗಿ ವೀಲ್ ಹಾಕುವುದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಒಂದೆರಡು ವರ್ಷದಲ್ಲಿ ಜವುಕು, ಕಿರು ಸೇತುವೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಕೋಳೂರು ಕ್ರಾಸ್-ಕುರುಗೋಡು, ಕುರುಗೋಡು-ಎಮ್ಮಿಗನೂರು, ಎಮ್ಮಿಗನೂರು-ಕಂಪ್ಲಿ,
ಬಳ್ಳಾರಿ / ಕಂಪ್ಲಿ : ರಾಮಸಾಗರದವರೆಗೆ ಸುಮಾರು 37 ಕಿ.ಮೀವರೆಗೆ ಸೇರಿದಂತೆ ಒಟ್ಟಾರೆಯಾಗಿ 67 ಕಿ.ಮೀ ರಸ್ತೆ ಅಭಿವೃದ್ಧಿಯಾದಂಗಾಗಿದೆ. ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿಗೆ ದಿನವಿಡಿ ಶ್ರಮಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಗ್ರಾಪಂ ಅಧ್ಯಕ್ಷೆ ಮಾಯಪ್ಪ, ಸದಸ್ಯರಾದ ನಾಯಕರ ವೆಂಕೋಬ, ಮೌನೇಶ, ಮುಖಂಡರಾದ ಕೆ.ಷಣ್ಮುಖಪ್ಪ, ಹೆಚ್.ಗುಂಡಪ್ಪ, ಕೋರಿ ಚನ್ನಬಸುವ, ಕರಿಯಪ್ಪ, ಚಾನಾಳ ಪಕ್ಕೀರಪ್ಪ, ಕೋರಿ ನಾಗೇಂದ್ರಪ್ಪ, ದೊಡ್ಡನಾಯಕ, ವಿರುಪಣ್ಣ, ಅಂಜಿನಿ ಸೇರಿದಂತೆ ಅನೇಕರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ