ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಮಳೆಗೆ ರಸ್ತೆ, ಚರಂಡಿಗಳು ಜಲಾವೃತ : ಮೂಲಭೂತ ಸೌಕರ್ಯಗಳಿಂದ ವಂಚಿತ 8ನೇ ವಾರ್ಡ್

ಬಳ್ಳಾರಿ / ಕಂಪ್ಲಿ: ಮಳೆ ಬಂದರೆ ಸಾಕು ರಸ್ತೆಗಳೆಲ್ಲಾ ಕಾಲುವೆಗಳಾಗುವಂತಾಗಿರುವುದು ಒಂದೆಡೆಯಾದರೆ, ಬೀದಿ ದೀಪಗಳಿಲ್ಲದೆ, ಚರಂಡಿಗಳಿಲ್ಲದೆ ಮೂಲಭುತ ಸೌಲಭ್ಯಗಳಿಂದ ವಂಚಿತವಾಗಿರುವುದು ಇನ್ನೊಂದೆಡೆಯಾಗಿದೆ. ಇವುಗಳ ಮಧ್ಯೆ ಕಂಪ್ಲಿ ಪುರಸಭೆಯ 8ನೇ ವಾರ್ಡಿನ ಸಾರ್ವಜನಿಕರ ಗೋಳನ್ನು ಕೇಳುವವರು ಇಲ್ಲದಂತಾಗಿದೆ.
ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ವಿಸ್ತೀರ್ಣವಿರುವ ವಾರ್ಡ್ ಇದಾಗಿದ್ದು, ಅತೀ ಹೆಚ್ಚು ತೆರಿಗೆ ಪಾವತಿಸುವ ವಾರ್ಡ್ ಸಹ ಇದೇ ಆಗಿದೆ. ಆದರೆ ಈ ವಾರ್ಡಿನ ಜನರಿಗೆ ಮೂಲಭೂತ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿವೆ.
ವಾರ್ಡಿನಲ್ಲಿ ರಸ್ತೆ, ಚರಂಡಿ,ಬೀದಿ ದೀಪಗಳನ್ನು ಒದಗಿಸಿಕೊಡುವಲ್ಲಿ ಪುರಸಭೆಯವರು ವಿಫಲರಾಗಿದ್ದಾರೆ.ವಿಪರ್ಯಾಸವೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿ ಸಮರ್ಪಕವಾಗಿ ರಸ್ತೆ, ಚರಂಡಿಗಳಿಲ್ಲವೆನ್ನುವುದೇ ಆಶ್ಚರ್ಯಕರ ಸಂಗತಿಯಾಗಿದೆ.
ಈ ಬಗ್ಗೆ ಸ್ಥಳೀಯ ವಾರ್ಡಿನ ಸದಸ್ಯರಾದ ಟಿ.ವಿ.ಸುದರ್ಶನರೆಡ್ಡಿಯವರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರಗಳನ್ನು ನೀಡಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿದ್ದರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ 2024ರಲ್ಲಿ ಎರಡು ಸಲ, 2025ರಲ್ಲಿ ಒಂದು ಸಲ ರಸ್ತೆ,ಚರಂಡಿ ಹಾಗೂ ಬೀದಿ ದೀಪಗಳನ್ನು ಒದಗಿಸಿಕೊಡುವಂತೆ ಮನವಿ ನೀಡಲಾಗಿದೆ. ಜೊತೆಗೆ ಪುರಸಭೆಯ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೂ ಮನವಿಯನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಾರ್ಡಿನಲ್ಲಿ ಸಮರ್ಪಕವಾದ ರಸ್ತೆಗಳು ಹಾಗೂ ಚರಂಡಿಗಳು ಇರುವುದರಿಂದ ಚರಂಡಿಯ ನೀರೆಲ್ಲಾ ರಸ್ತೆ ಮೇಲೆ ಹರಿಯುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಇನ್ನು ಬೀದಿ ದೀಪಗಳಂತೂ ಕೇಳುವುದೇ ಬೇಡ. ಬೀದಿ ದೀಪಗಳಿಲ್ಲದೆ ನೀರು ನಿಂತಿರುವ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಇನ್ನು ಮಳೆಯಾದರಂತೂ ಮುಗಿದೇ ಹೋಯ್ತು, ರಸ್ತೆಗಳೆಲ್ಲಾ ಕಾಲುವೆಗಳಂತಾಗಿ ಪ್ರತಿದಿನ ಓಡಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ಸ್ಥಳೀಯರು.
ವಾರ್ಡಿನಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪುರಸಭೆಯಲ್ಲಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳನ್ನು ವಿಚಾರಿಸಿದರೆ ಸೂಕ್ತವಾದ ಉತ್ತರವನ್ನೇ ನೀಡುತ್ತಿಲ್ಲವೆಂದು ವಾರ್ಡಿನ ಅನೇಕ ಜನರು ದೂರುತ್ತಿದ್ದಾರೆ. ನಮ್ಮ ವಾರ್ಡಿನ ಸದಸ್ಯರನ್ನು ವಿಚಾರಿಸಿದರೆ ನಾನು ಸಹಿತ ಪುರಸಭೆಯಲ್ಲಿ ಹಾಗೂ ಜಿಲ್ಲಾಧಿಕಾರಿಗಳಿಗೆ ಅನೇಕ ಸಲ ಮೂಲಭುತ ಸೌಕರ್ಯಗಳಿಗಾಗಿ ಮನವಿಯನ್ನು ಸಲ್ಲಿಸಿದ್ದೇನೆ ಎಂದು ತಿಳಿಸುತ್ತಾರೆ ಎಂದು ತಮ್ಮ ಅಸಮಧಾನವನ್ನು ತೋಡಿಕೊಳ್ಳುತ್ತಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ