ವಂಚನೆ ಮೋಸಗಾರಿಕೆ ಮಾಡಲಾರರು
ಕಳ್ಳ ಮಾರ್ಗದಿ ಎಂದೂ ನುಸುಳಲಾರರು
ಸಿಂಧೂರ ಅಳಿಸಿದವರನ್ನು ಬಿಡಲಾರರು
ಓ ಭಾರತಮಾತೆ ಹಾಕದಿರು ನೀ ಕಣ್ಣೀರು.
ಅನ್ಯಾಯ ಅನೀತಿ ಕಿಂಚಿತ್ತೂ ಸಹಿಸರು
ಹಿಂದೂ ಸಂಸ್ಕೃತಿಯ ಉಳಿಸದೇ ಇರರು
ಧರ್ಮ ಮಾರ್ಗವ ಬಿಟ್ಟು ಎಂದೂ ಬಿಡರು
ಓ ಭಾರತಮಾತೆ ಹಾಕದಿರು ನೀ ಕಣ್ಣೀರು.
ದಿಟ್ಟತನದಿ ಕೊಟ್ಟೇ ಕೊಡುವರು ಪ್ರತ್ಯುತ್ತರ
ಮಾಡೇ ಮಾಡುವರು ಆ ಸೈನ್ಯವನ್ನು ತತ್ತರ
ಏರುವುದು ನೆಲದ ಮಹಿಮೆ ಬಲು ಎತ್ತರ
ಓ ಭಾರತಮಾತೆ ಹಾಕದಿರು ನೀ ಕಣ್ಣೀರು.
ಎದೆಯೊಡ್ಡಿ ನಿಲ್ಲುವ ದಿಟ್ಟ ಯೋಧರಿದ್ಧಾರೆ
ಉಗ್ರರನ್ನು ಮಟ್ಟ ಹಾಕಲು ಸಿದ್ಧರಾಗಿದ್ದಾರೆ
ಸೇರಿಗೆ ಸವಾ ಸೇರು ಎಂಬಂತೆ ನಿಂತಿದ್ದಾರೆ
ಓ ಭಾರತಮಾತೆ ಹಾಕದಿರು ನೀ ಕಣ್ಣೀರು.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.
