ಬೆಂಗಳೂರು:ಮಾತಿನ ಮನೆಯ 104ನೆಯ ಕಾರ್ಯಕ್ರಮವಾಗಿ ಶ್ರೀ ಶ್ರೀನಿವಾಸ ಪ್ರಭು ಶ್ರೀಮತಿ ಹಾಗೂ ರಂಜಿನಿ ಪ್ರಭು ಅವರಿಂದ ನಿನ್ನ ಗಜಲ್ ನನ್ನ ಕವಿತೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಮಾತಿನ ಮನೆಯ ಸಾಮಾಜಿಕ ಕಳಕಳಿಯಾಗಿ ಶಾಲಾ ಮಕ್ಕಳಿಗೆ ನೀಡಲಾಗುವ ಪುಸ್ತಕವನ್ನು ಶ್ರೀ ಶ್ರೀನಿವಾಸ ಪ್ರಭು ಲೋಕಾರ್ಪಣೆ ಮಾಡಿದರು.
ಪ್ರಾಸ್ತಾವಿಕದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಮಾತಿನ ಮನೆಯ ರಾ ಸು ವೆಂಕಟೇಶ ಅವರು 104 ವಿಭಿನ್ನ ಕಾರ್ಯಕ್ರಮಗಳನ್ನು ಆಸಕ್ತ ಮನಸ್ಸುಗಳಿಗೆ ನೀಡಿರುವುದಾಗಿ ತಿಳಿಸಿದ್ದರು.
ಒಂದೂವರೆ ಗಂಟೆಗಳ ಕಾಲ ಪ್ರಭು ದಂಪತಿಗಳು ಕವಿತೆ ಹಾಗೂ ಗಜಲ್ ಗಳ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ನಿರೂಪಣೆ ಹಾಗೂ ವಂದನಾರ್ಪಣೆಯನ್ನು ರಾಧಾ ಕೇಶವ್ ನಿರ್ವಹಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಬೆಂಗಳೂರು
