
ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ಹನೂರು ತಾಲೂಕಿನಲ್ಲಿ ಕೃಷಿ ಫೌಂಡೇಶನ್ ಫಾರ್
ನ್ಯೂ ಇಂಡಿಯಾ ವತಿಯಿಂದ ರೈತರ ಜಮೀನಿಗೆ ಭೇಟಿ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರೈತರ ಜಮೀನಿಗೆ ಭೇಟಿ ನೀಡಿ ಮೂರು ದಿನ ಪ್ರವಾಸದ ಸಂದರ್ಭದಲ್ಲಿ ತಾಲೂಕಿನ ಒಡೆಯರ ಪಾಳ್ಯ, ಲೊಕ್ಕನಹಳ್ಳಿ , ಹನೂರು, ಬೈಲೂರ್, ಟಿಬೇಟಿಯನ್ ಸೆಟಲ್ಮೆಂಟ್ನನ M ವಿಲೇಜ್ ರೈತರ ಜಮೀನಿಗೆ ಭೇಟಿ ನೀಡಿದರು.
ರೈತರೊಂದಿಗೆ ಬೆಳ್ಳುಳ್ಳಿ ಹಾಗೂ ತರಕಾರಿ ಬೆಳೆಗಳ ಕೃಷಿ ಹಾಗೂ ಮಾರಾಟದ ಬಗ್ಗೆ ಸಂವಾದ, ವಿಚಾರ ವಿನಿಮಯ ಮಾಡಿ ರೈತರಿಗೆ ಸೂಕ್ತ ಸಲಹೆ ಸೂಚನೆ, ಮಾರ್ಗದರ್ಶನ ನೀಡಿದ ನಂತರ ಪಾಮ್ ರೋಜ್ ಸುಗಂಧ ತೈಲ ಸಂಸ್ಕರಣೆ ಘಟಕಕ್ಕೆ ಭೇಟಿ ನೀಡಿದರು.
ಆಫನಿ ಸಂಸ್ಥೆಯು ರೈತರ ಸಮಸ್ಯೆಗಳನ್ನು ತಿಳಿದುಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ, ಮುಂಬರುವ ದಿನಗಳಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಸಹಾಯ, ಸಹಕಾರ, ಮಾರ್ಗದರ್ಶನ ಮಾಡುತ್ತೇವೆ ಎಂದು
ಕೃಷಿ ಫೌಂಡೇಶನ್ ಫಾರ್ ನ್ಯೂ ಇಂಡಿಯಾ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಫೌಂಡೇಶನ್ ಫಾರ್
ನ್ಯೂ ಇಂಡಿಯಾ ಪ್ರಧಾನ ಕಾರ್ಯದರ್ಶಿ
ಶ್ರೀ ಕುಲಕರ್ಣಿ ಎ.ಎಸ್. ನಿವೃತ್ತ ಮುಖ್ಯ ವ್ಯವಸ್ಥಾಪಕರು, ಕಾರ್ಪೋರೇಶನ್ ಬ್ಯಾಂಕ್, ಅಧ್ಯಕ್ಷರು ಡಾ. ಕುಮ್ಮೂರ್, ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರು ನಬಾರ್ಡ್, ಉಪಾಧ್ಯಕ್ಷರು: ಪಿ ಬಿ. ರಾಮಮೂರ್ತಿ,ಐಎಎಸ್ ನಿವೃತ್ತ, ಅಪರ ಮುಖ್ಯ ಕಾರ್ಯದರ್ಶಿ,ಕರ್ನಾಟಕ ಸರ್ಕಾರ ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
