ಬಳ್ಳಾರಿ / ಕಂಪ್ಲಿ : ನಮ್ಮ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಸಮ್ಮುಖದಲ್ಲಿ ಪರಿಹಾರ ದೊರಕುವವರೆಗೂ ಮುಷ್ಕರ ನಡೆಸುತ್ತೇವೆ” ಎಂದು ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ. ಪ್ರಭಾಕರ ತಿಳಿಸಿದ್ದಾರೆ. ಪ್ರತಿಭಟನೆ ಸತತ 2ನೇ ದಿನಕ್ಕೆ ಕಾಲಿಟ್ಟಿದ್ದು, ಕಂಪ್ಲಿ ನಗರದ ರಸ್ತೆಗಳೆಲ್ಲವೂ ಗಬ್ಬೆದ್ದು ನಾರುತ್ತಿದೆ.
ಇನ್ನು ಪೌರಾಡಳಿತ ಸಚಿವರಾದ ಸನ್ಮಾನ್ಯ ರಮ್ ಖಾನ್ 5 ಅಥವಾ ಆರು ದಿನಗಳ ಒಳಗಾಗಿ ನಿಮ್ಮ ಬೇಡಿಕೆಯ ಆದೇಶವನ್ನು ಮಾಡುತ್ತೇನೆ ನಿಮ್ಮ ಮುಷ್ಕರವನ್ನು ಹಿಂಪಡೆಯಿರಿ ಎಂದು ತಿಳಿಸಿದರು. ಹಾಗೂ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ರಾಜ್ಯ ಪೌರ ನೌಕರರ ಸಂಘದ ಜೊತೆ ದೂರವಾಣಿ ಕರೆ ಮಾಡಿ ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಆದರೂ ಸಹ ನಾಳೆ ಪೌರ ಕಾರ್ಮಿಕರು ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಪೌರಕಾರ್ಮಿಕರು ನಡೆಸ್ತಿರೋ ಮುಷ್ಕರಕ್ಕೆ ಪಟ್ಟಣವೆಲ್ಲಾ ಗಬ್ಬೆದ್ದು ನಾರುತ್ತಿದೆ. ರಸ್ತೆ ಗುಡಿಸೋರಿಲ್ಲ, ಮನೆ ಮನೆಯಲ್ಲಿ ಸಂಗ್ರಹವಾಗಿರುವ ಕಸ ಕೇಳೋರಿಲ್ಲ. ಕಟ್ಟಿರುವ ಚರಂಡಿ ಸರಿಪಡಿಸುವವರಿಲ್ಲ. ಸ್ವಚ್ಛತಾ ವಾಹನಕ್ಕೆ ಚಾಲಕರೇ ಇಲ್ಲದೆ ಪಟ್ಟಣವೆಲ್ಲಾ ದುರ್ನಾತ ಬೀರುತ್ತಿದೆ.
ನಗರದ ಸ್ವಚ್ಛತಾ ಕಾರ್ಯಕ್ಕೆ ಪಾರ್ಶ್ವವಾಯು ಹೊಡೆದಂತಾಗಿದೆ. ನಿತ್ಯ 15 ರಿಂದ 16 ಟನ್ ವಿಲೇವಾರಿಯಾಗುತ್ತಿದ್ದ ಕಸ, ಈಗ ಪಟ್ಟಣದಲ್ಲಿಯೇ ಬಿದ್ದಿದ್ದು, ಕಳೆದ ಎರಡು ದಿನಗಳಲ್ಲಿ 30ಕ್ಕು ಹೆಚ್ಚು ಟನ್ ಕಸ ಸಂಗ್ರಹವಾಗಿ ವಿಲೇವಾರಿಯಾಗದೇ ಬಿಟ್ಟುಬಿಡದೆ ಬರುತ್ತಿರುವ ಮಳೆಯಲ್ಲಿ ಪ್ರಮುಖವಾದ ರಸ್ತೆ, ಮನೆ, ರಸ್ತೆಯಲ್ಲಿಯೇ ಕಸ ಕೊಳೆತು, ಇಡೀ ಪಟ್ಟಣ ದುರ್ವಾಸನೆ ಬೀರುತ್ತಿದೆ.
ಪೌರಕಾರ್ಮಿಕರ ಮುಷ್ಕರ ಬೇಗನೆ ಮುಗಿದು ಮತ್ತೆ ಸ್ವಚ್ಚದ ಪಟ್ಟಣವಾಗುತ್ತೋ ಅಥವಾ ಸಾರ್ವಜನಿಕರು ಮೂಗು ಮುಚ್ಚಿಕೊಂಡೆ ಸಂಚರಿಸಬೇಕಾಗುತೋ ಕಾದು ನೋಡೋಣ…
ವರದಿ : ಜಿಲಾನಸಾಬ್ ಬಡಿಗೇರ್
