ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅರೋಗ್ಯಕರ ಜೀವನಕ್ಕೆ ಸಂಗೀತ ಅವಶ್ಯ ಡಾ. ಮ ನಿ ಪ್ರ ಚನ್ನಾಮಲ್ಲ ಮಹಾಸ್ವಾಮಿಗಳು

ಬಾಗಲಕೋಟೆ:ಎಲ್ಲರನ್ನು ರಮಿಸುವ ಕಲೆ ಎಂದರೆ ಸಂಗೀತ. ಎಲ್ಲ ಗಾಯನಗಳ ಮೂಲ ಸಂಗೀತ.. ಸಂಗೀತ,ಚಿಂತೆ ದೂರ ಸರಿಸುವ ಔಷಧಿ, ಸಂಗೀತದಿಂದಲೇ ನಮ್ಮ ಜೀವನಕ್ಕೆ ಆರೋಗ್ಯ ಕೂಡಾ ಸಿಗುತ್ತದೆ ಎಂದು ಕಂದಗಲ್ಲಿನ ಸುವರ್ಣಗಿರಿ ಶ್ರೀ ರುದ್ರಸ್ವಾಮಿ ಮಠದ ಡಾ. ಮ. ನಿ. ಪ್ರ ಚನ್ನಮಲ್ಲ ಮಹಾಸ್ವಾಮಿಗಳು ಹೇಳಿದರು ಜಿಲ್ಲೆಯ ಇಲ್ಕಲ್ ತಾಲೂಕಿನ ಕಂದಗಲ್ ಗ್ರಾಮದ ಗ್ರಾಮದ ರುದ್ರಸ್ವಾಮಿ ಮಠದಲ್ಲಿ ಜರುಗಿದ 53ನೇ ಶಿವಾನುಭವ, ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ 2024 – 25 ನೇ ಸಾಲಿನ ಪಿಯುಸಿ ಮತ್ತು ಎಸ್. ಎಸ್. ಎಲ್. ಸಿ ಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಬಸವರಾಜ. ವಿ. ಶಿಂಪಿ, ಅಮರೇಶ.ಮ.ಮಠ, ದಿವ್ಯ ಶರಣಪ್ಪ ಮಡಿವಾಳರ, ಬಸವರಾಜೇಶ್ವರಿ ವೀರೇಶ ತುಂಬದ, ಜ್ಯೋತಿ ಮಲ್ಲಪ್ಪ ಕಡಿವಾಲ,ನಾಗರತ್ನ ಚಂದ್ರು ಬುಕೀಟಗಾರ, ಮೌಲಾಬಿ ಖಾದರಸಾಬ್ ಕುದುರಿ, ಸಹನಾ ವಿಜಯ್ ಕುಮಾರ್ ಶಿವನಗುತ್ತಿ, ಸಾಗರ್ ಶಿವನಗುತ್ತಿ, ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಸಂಗೀತ ನೀಡಿದ ಆಕಾಶವಾಣಿ ದೂರದರ್ಶನ ಕಲಾವಿದರಾದ ಸಂಗಮೇಶ್ ನೀಲಿಮಠ, ಪ್ರತಾಪ್ ಕುಮಾರ್ ಹಿರೇಮಠ ಕುಷ್ಟಗಿ ಮತ್ತು ಅತಿಥಿ ಸ್ಥಾನ ಅಲಂಕರಿಸಿ ಪ್ರಸಾದ ಸೇವೆಯನ್ನು ಒದಗಿಸಿದ ಮಂಜುನಾಥ ಕಡಿವಾಲ ಇವರುಗಳನ್ನು ಸತ್ಕರಿಸಲಾಯಿತು.

ದಿವ್ಯಾ ಮಡಿವಾಳರ ಪ್ರಾರ್ಥನೆ ಮಾಡಿದರು, ಪಂಪಣ್ಣ ಸಜ್ಜನ್ನ ಸ್ವಾಗತಿಸಿದರು, ಕು. ಶಾಲಿನಿ ಹಿರೇಮಠ್ ನುಡಿ ನಮನ ಸಲ್ಲಿಸಿದರು, ಮಹಾಂತೇಶ.ಮ. ಕಡಿವಾಲ ವಂದಿಸಿದರು. ಕು. ರಂಜಿತಾ ಐದನಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಹಾಗೂ ಕಂದಗಲ್ಲ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ