ವಿಜಯಪುರ/ ತಾಳಿಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಕರೆದ ರಾಜ್ಯ ವ್ಯಾಪ್ತಿ ಅನಿರ್ಧಾಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸಿ ತಾಳಿಕೋಟೆ ಪುರಸಭೆ ಕಾರ್ಮಿಕರು ಮೇ 27ರಿಂದ ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ಪುರಸಭೆ ಕಾರ್ಯಾಲಯದ ಆವರಣದಲ್ಲಿ ಧರಣಿ ಆರಂಭಿಸಿದ ಪೌರಕಾರ್ಮಿಕರು ರಾಜ್ಯ ಸರ್ಕಾರ ನಮ್ಮೊಂದಿಗೆ ಮಲತಾಯಿ ಧೋರಣೆ ತೋರುತ್ತಿದ್ದು ಎಲ್ಲಾ ಸರ್ಕಾರಿ ನೌಕರರನ್ನು ಒಂದೇ ದೃಷ್ಟಿಯಿಂದ ಕಾಣುತ್ತಿಲ್ಲ ನಮ್ಮ ಪ್ರಮುಖ ಬೇಡಿಕೆಗಳಾದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದೇ ಪರಿಗಣಿಸಬೇಕು, ಜ್ಯೋತಿ ಸಂಜೀವಿನಿ ಕೆಜೆಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಹೀಗೆ ಹಲವು ಬೇಡಿಕೆಗಳನ್ನು ತೆಗೆದುಕೊಂಡು ಮುಷ್ಕರ ನಡೆಸುತ್ತಿದ್ದು ಅದು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಎಲ್ಲಾ ಪೌರ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಿದ್ದರು.
ಈ ಸಮಯದಲ್ಲಿ ಪೌರ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸುರೇಶ ಅಂಬ್ರಣ್ಣವರ, ಜಿಲ್ಲಾ ಪರಿಷತ್ ಕಾರ್ಯದರ್ಶಿ ಶ್ರೀಪಾದ ಜೋಶಿ, ಸಂಘದ ತಾಲೂಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಉಪಾಧ್ಯಕ್ಷ ಸಿದ್ದು ಕೊಳ್ಳಿ, ಸಿದ್ದಲಿಂಗಯ್ಯ ಪಾಟೀಲ, ಶಿವಾನಂದ ಜುಮನಾಳ, ಆರ್ ಐ ಪೊಲೀಸ್ ಪಾಟೀಲ, ಸಂದೀಪ ವಠಾರ, ಐ.ಎಚ್.ಮಕಾಂದಾರ, ಡಿ.ಬಿ.ಜಾನ್ವೇಕರ, ಪ್ರದೀಪ ಶಿವಶರಣ, ಪ್ರಭು ನಾಲತವಾಡ, ಆನಂದ ನಾಯಕ, ಪಡಶೆಟ್ಟಿ, ಫಿರೋಜ್ ಮುಲ್ಲಾ, ರಂಗನಾಥ ಅಜಮನಿ ಹಾಗೂ ಎಲ್ಲಾ ಪೌರಕಾರ್ಮಿಕರು ಇದ್ದರು.
ವರದಿ :ನಜೀರ್ ಚೋರಗಸ್ತಿ, ತಾಳಿಕೋಟೆ
