
ತುಮಕೂರು ಜಿಲ್ಲೆ ತಿಪಟೂರು ತಾಲೂಕು ಕುಪ್ಪಾಳು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಹೊನ್ನಮ್ಮನವರ ನಕಲಿ ಸಹಿ ಮಾಡಿ ಇದೇ ಗ್ರಾಮ ಪಂಚಾಯಿತಿ ಸಾಮಾನ್ಯ ಕ್ಷೇತ್ರದ ಸದಸ್ಯರಾದ ಕೊಟ್ಟಿಗೆಹಳ್ಳಿ ಯೋಗಾನಂದ ತಾಲೂಕು ಪಂಚಾಯಿತಿ ಕಚೇರಿಗೆ ದೂರು ನೀಡಿರುವ ವಿಷಯ ಬೆಳಕಿಗೆ ಬಂದಿದೆ.
ಕುಪ್ಪಾಳು ಗ್ರಾಮ ಪಂಚಾಯಿತಿಯ ಕಾಮಗಾರಿಗಳ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರ ವಿರುದ್ಧ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ದೂರು ಸಲ್ಲಿಸುವ ಸಂಬಂಧ ದೂರು ಅರ್ಜಿಗೆ ಗ್ರಾಮ ಪಂಚಾಯಿತಿ ದಲಿತ ಸದಸ್ಯ ಶ್ರೀಮತಿ ಹೊನ್ನಮ್ಮನವರ ನಕಲಿ ಸಹಿ ಮಾಡಿದ್ದಾರೆಂದು ಆರೋಪಿಸಿ ಸದಸ್ಯೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ದೂರು ಸಲ್ಲಿಸಿರುತ್ತಾರೆ. ಇದೇ ವಿಚಾರವನ್ನು ಅಧ್ಯಕ್ಷರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಅಧ್ಯಕ್ಷರಿಗೆ ದೂರು ನೀಡಿರುವ ಸದಸ್ಯೆಯ ವಿರುದ್ಧವೇ ಉಳಿದ ಸದಸ್ಯರಾದ ಮಹೇಶ್ ಶಿವಪುರ ಷಡಕ್ಷರಿ ಮುಗಿಬಿದ್ದಿದ್ದಾರೆ.
ಸದಸ್ಯೆ ತಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿರುವ ಬಗ್ಗೆ ಹೀಗೆ ಇನ್ನೂ ಯಾವ ಯಾವ ವಿಷಯಗಳಲ್ಲಿ ನನ್ನ ನಕಲಿ ಸಹಿ ಮಾಡಿದ್ದೀರಿ ಎಂದು ಜೋರು ಧ್ವನಿಯಲ್ಲಿ ಪ್ರಶ್ನಿಸಿದಾಗ ನಕಲಿ ಸಹಿ ಮಾಡಿರುವ ಕೊಟ್ಟಿಗೆಹಳ್ಳಿ ಯೋಗಾನಂದ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ.
ನಂತರ ಸಭೆಯಲ್ಲಿ ಇದೇ ರೀತಿ ಇನ್ನೂ ಎಷ್ಟು ಸಹಿ ಮಾಡಿರಬಹುದೆಂಬ ಅನುಮಾನದ ಮೇರೆಗೆ ತನಿಖೆ ಮಾಡಬೇಕೆಂದು ತಿಪಟೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕೋರಲು ತೀರ್ಮಾನಿಸಲಾಗಿರುತ್ತದೆ ಹಾಗೂ ಈ ವಿಷಯದಲ್ಲಿ ಗ್ರಾಮ ಪಂಚಾಯಿತಿ ದಲಿತ ಸದಸ್ಯೆಯ ನಕಲಿ ಸಹಿ ಮಾಡಿರುವ ಆರೋಪದ ಮೇರೆಗೆ ಸದಸ್ಯ ಯೋಗಾನಂದ ಹಾಗೂ ಇದಕ್ಕೆ ಪ್ರಚೋದನೆ ನೀಡಿದ ಬಳೆಕಟ್ಟೆ ಮಹೇಶ್ ಮತ್ತು ಶಿವಪುರ ಷಡಕ್ಷರಿ ಇವರನ್ನು ಗ್ರಾಮ ಪಂಚಾಯತಿ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.
- ಕರುನಾಡ ಕಂದ
