
ತುಮಕೂರು/ ಪಾವಗಡ : ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ ಎಂ ತಿಮ್ಮರಾಯಪ್ಪ ರವರ 65 ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದ ಬಲ್ಲೇನಹಳ್ಳಿ ಗ್ರಾಮಸ್ಥರು ಮತ್ತು JDS ಕಾರ್ಯಕರ್ತರು ಅಂಬೇಡ್ಕರ್ ರವರ ಪುತ್ಥಳಿಗೆ ಪುಷ್ಪ ಮಾಲೆ ಹಾಕಿ ಅಂಬೇಡ್ಕರ್ ರವರಿಗೆ ಪಾದಾಭಿನಂದನೆ ಮಾಡಿ ನಂತರ ಅಭಿಮಾನಿಗಳ ಮಧ್ಯೆ ಕೇಕ್ ಕತ್ತರಿಸುವ ಮೂಲಕ ತಮ್ಮ 65ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಅಸೆಯಂತೆ ಸರಳವಾಗಿ ಅಚರಿಸಿದರು.
ನಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರಿ ತಿಮ್ಮರಾಯಪ್ಪ ರವರಿಗೆ ಪೇಟಾ ಮತ್ತು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ನಂತರ ತಿಮ್ಮರಾಯಪ್ಪ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತಾ ಈ ಬಿ ಹೊಸಹಳ್ಳಿ ಮಲ್ಲಿಕಾರ್ಜುನ ರವರು ತಿಮ್ಮರಾಯಪ್ಪ ರವರ ಅಧಿಕಾರದ ಅವಧಿಯಲ್ಲಿ ನಡೆದಂತ ಮತ್ತು ಅವರ ಪ್ರಯತ್ನದಿಂದ SCP ಮತ್ತುTSP ಯೋಜನೆಯ ಜಾರಿಗೆ ಬರುವುದರಲ್ಲಿ ಪ್ರಮುಖರು ಅದೇ ರೀತಿಯಲ್ಲಿ ಪಾವಗಡ ತಾಲೂಕನ್ನು ಗುಡಿಸಲು ರಹಿತ ಯೋಜನೆ ತಾಲೂಕಿಗೆ ಗುಡಿಸಲು ರಹಿತ ಮನೆಗಳು ಬರುವಂತೆ ಶ್ರಮಿಸಿದರು ಹಾಗೆಯೇ 8 ಮೊರಾರ್ಜಿ ಮತ್ತು ವಾಜಪೇಯಿ ವಸತಿ ಶಾಲೆಗಳನ್ನು ತಂದಿರುವಂತ ಧೀಮಂತ ನಾಯಕರು ನಮ್ಮ ಕೆ. ಎಂ. ತಿಮ್ಮರಾಯಪ್ಪ ರವರು ಎಂದು ಅವರ ಅಧಿಕಾರ ಅವಧಿಯಲ್ಲಿ ನಡೆದಂತ ಅಭಿವೃದ್ಧಿ ಬಗ್ಗೆ ವಿವರಿಸಿ ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಗೋಪಾಲ್, ಚನ್ನಕೇಶವ ,ರಾಮಾಂಜಿ ಮಲ್ಲೇಶ , ಅಶೋಕ್, ನಾಗರಾಜಪ್ಪ, ರಾಮಣ್ಣ ಹಾಗೂಬಲ್ಲೇನಹಳ್ಳಿ ಗ್ರಾಮಸ್ಥರು ಹಾಗೂ JDS ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಪೃಥ್ವಿರಾಜು ಜಿ. ವಿ.
