ಯಾದಗಿರಿ/ಗುರುಮಠಕಲ್: ಗಾಜರಕೋಟ್ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಇಂದು ಗುರುಮಠಕಲ್ ಪೊಲೀಸ್ ಠಾಣೆಗೆ ಹೊಸದಾಗಿ ಅಧಿಕಾರ ಸ್ವೀಕರಿಸಿದ ಆರಕ್ಷಕ ನಿರೀಕ್ಷಕರಾದ ಶ್ರೀ ವೀರಣ್ಣ ದೊಡ್ಡಮನಿಯವರಿಗೆ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ ಸ್ವಾಗತ ಕೋರಿದರು.
ಗಾಜರಕೋಟ್ ಗ್ರಾಮ ಪಂಚಾಯಿತಿ ಸದಸ್ಯರಾದ ಯಲ್ಲಪ್ಪ ಪಿರಂಗಿ, ಬಾಲಪ್ಪ ಹಾಗೂ ಜೆ.ಡಿ.ಎಸ್ ಪಕ್ಷದ ಮುಖಂಡರಾದ ಮಲ್ಲಪ್ಪ ಜೋಗಿ, ನರಸಪ್ಪ ಗಡ್ಡಪಾರ, ಸಾಬಣ್ಣ ಗಾರೆಬಾನಿ, ಹಣುಮಂತು ನಾಚವಾರ್, ಕಾಂಗ್ರೆಸ್ ಪಕ್ಷದ ಜಗದೀಶ್ ಪೂಜಾರಿ, ಲಿಂಗಪ್ಪ ತಂಡೂರಕರ್ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ
