ಬೆಂಗಳೂರು/ ನೆಲಮಂಗಲ :ಭಗವದ್ ಶ್ರೀ ರಾಮಾನುಜಾಚಾರ್ಯರ 1008 ನೇ ವರ್ಷದ ತಿರುನಕ್ಷತ್ರದ ಪ್ರಯುಕ್ತ ಶ್ರೀ ವೈಷ್ಣವ ಸಂಘ ಟಿ.ಬೇಗೂರು (ರಿ.) ವತಿಯಿಂದ 8 ನೇ ವರ್ಷದ ಸಾಮೂಹಿಕ ಉಪನಯನ ಕಾರ್ಯಕ್ರಮವು ಭಗವದ್ ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸುಮಾರು 23 ಕ್ಕೂ ಹೆಚ್ಚು ಶ್ರೀ ವೈಷ್ಣವ ಯುವಕರಿಗೆ ಯಜ್ನೋಪವೀತ (ಜನಿವಾರ) ಧಾರಣೆ ಆಚಾರ್ಯರ ಮೂಲಕ ಶಾಸ್ತ್ರೋಕ್ತವಾಗಿ ನೆರವೇರಿತು,
ಶ್ರೀ ರಾಮಾನುಜ ತಿರು ನಕ್ಷತ್ರದ ಅಂಗವಾಗಿ ಶನಿವಾರ ಸಂಜೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕ್ಷೇತ್ರ ದೇವತ ಅನುಗ್ನೆ ,ಸಭಾ ಪ್ರಾರ್ಥನೆ, ವಿಷ್ವಕ್ಸೇನಾರಾಧನ, ಋತ್ವಿಕ್ವರುಣ, ಉದಕ ಶಾಂತಿ, ರಕ್ಷಾಬಂಧನ, ಅಂಕುರಾರ್ಪಣೆ, ಭಗವದಾರಾಧನೆ, ಮಂಗಳಾಶಾಸನಮ್, ಆರತಿ, ತೀರ್ಥ ಪ್ರಸಾದ ವಿನಿಯೋಗ ನಂತರ ಚೌಲ ಕಾರ್ಯಕ್ರಮ ನೆರವೇರಿಸಿದರು, ನಂತರ ಭಾನುವಾರ ಮುಂಜಾನೆಯಿಂದಲೇ ವಿಷ್ವಕ್ಸೇನಾರಾಧನ, ಪುಣ್ಯಾಹವಾಚನ, ಮಹಾ ಸಂಕಲ್ಪ, ಯಜ್ನೋಪವೀತ ಪೂಜೆ, ಉಪವೀತ ದಾರಣೇ, ಕುಮಾರ ಭೋಜನ, ಅಗ್ನಿ ಮುಖಮ್, ಉಪನಯನಂ, ಹೋಮಂ, ಮಂತ್ರೋಪದೇಶ, ಅಗ್ನಿ ಕಾರ್ಯ, ಭಿಕ್ಷಾ, ಮೇದಾಜನನಂ, ನಂತರ ರಾಮಾನುಜರ ಉತ್ಸವದೊಂದಿಗೆ ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಯವರನ್ನು ಸಂಘದ ಆವರಣಕ್ಕೆ ಪೂರ್ಣಕುಂಭದೊಂದಿಗೆ ಕರೆತಲಾಯಿತು. ಸ್ವಾಮೀಜಿಯವರು ಆಗಮಿಸಿದ ನಂತರ ಎಲ್ಲಾ ವಟುಗಳಿಗೆ ಸಮಾಶ್ರಯಣ ನೆರವೇರಿಸಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಸ್ತ ಭಕ್ತರನ್ನು ಹಾಗೂ ವೈಷ್ಣವ ಬಂಧುಗಳನ್ನು ಉದ್ದೇಶಿಸಿ ಉಪನಯನ ಎಂಬುವುದು ಹಿಂದು ಧರ್ಮದ ಪ್ರಕಾರ ಪ್ರಮುಖ ಸಂಸ್ಕಾರ, ಬಾಲ್ಯದಲ್ಲಿರುವ ಮಕ್ಕಳಿಗೆ ವೇದಾದ್ಯಯನ ಮತ್ತು ಆಧ್ಯಾತ್ಮಿಕ ಜೀವನಕ್ಕೆ ದೀಕ್ಷೆ ನೀಡುವ ಈ ಸಂಸ್ಕಾರದಿಂದ ಎರಡು ಬಾರಿ ಹುಟ್ಟಿದವನೆಂದು ಪರಿಗಣಿಸುತ್ತೇವೆ. ಇಲ್ಲಿ ಪ್ರಮುಖವಾಗಿ ಒಂದು ಜೈವಿಕ ಜನನ ಹಾಗೂ ಆಧ್ಯಾತ್ಮಿಕ ಜನನ ವಟುಗಳು ಗಾಯತ್ರಿ ಮಂತ್ರ ಉಪದೇಶಿಸಿ ಬ್ರಹ್ಮಚಾರ್ಯಾಶ್ರಮ ಪ್ರವೇಶಿಸುತ್ತಾರೆ. ಇದು ಶಿಸ್ತುಬದ್ಧ ಜೀವನಕ್ಕೆ ದಾರಿಯಾಗುತ್ತದೆ. ಜತೆಗೆ ಗುರುಕುಲದ ವಾಸವು ನಿಮಗೆ ಜ್ಞಾನವನ್ನು, ಸಂಸ್ಕಾರವನ್ನು ಮತ್ತು ಶಿಸ್ತನ್ನು ಕಲಿಸಿ ಕೊಡುತ್ತದೆ. ನಮ್ಮ ಋಷಿ ಮುನಿಗಳು ತೋರಿಸಿದ ಮಾರ್ಗದಲ್ಲಿ ನಡೆಯುತ್ತಾ, ವೇದಗಳ ಅಧ್ಯಯನದಿಂದ ಆತ್ಮ ಜ್ಞಾನವನ್ನು ಪಡೆಯಬೇಕು. ಗುರುಗಳ ಆಜ್ಞೆಯನ್ನು ಪಾಲಿಸಿ, ಸದಾ ಸತ್ಯವನ್ನು ನುಡಿಯಿರಿ, ಧರ್ಮವನ್ನು ಆಚರಿಸುವ ಮೂಲಕ ನಿಮ್ಮ ತಂದೆ-ತಾಯಿಗಳು ನಿಮಗೆ ನೀಡಿದ ಈ ಸದಾವಕಾಶ ಸದುಪಯೋಗ ಪಡಿಸಿಕೊಳ್ಳಿ, ತಿರುನಕ್ಷತ್ರ ಎಂದರೆ ಶ್ರೇಷ್ಠವಾದ ನಕ್ಷತ್ರ, ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಮುಕ್ತಿ ಮಾರ್ಗದಲ್ಲಿ ಹೋಗಬಹುದೆಂಬುದನ್ನು ಸಾರಿದವರು ರಾಮಾನುಜರು. ಕರ್ನಾಟಕಕ್ಕೂ ಆಗಮಿಸಿ ಸುಮಾರು 32 ವರ್ಷ ಈ ನಾಡಿನಾದ್ಯಂತ ಸಂಚರಿಸಿ ಭಕ್ತಿಯನ್ನು ಎಲ್ಲ ವರ್ಗದವರಿಗೂ ಪರಿಚಯಿಸಿದ ಸಂತರು ರಾಮಾನುಜರು ನಾವೆಲ್ಲಾ ಅವರ ರಾಮಾನುಜರ ದಾಸರಾಗಿ ದೂತರಾಗಿ ಅವರು ಹಾಕಿ ಕೊಟ್ಟ ಸನ್ಮಾರ್ಗದ ದಾರಿಯಲ್ಲಿ ಸಾಗಬೇಕು, ಮಹಾ ಮಂತ್ರವಾದ ಶ್ರೀ ಮತೇರಾಮಾನುಜಾಯ ನಮಃ ನಮ್ಮ ಧ್ಯೇಯವಾಕ್ಯ ವಾಗಿರಬೇಕು, ಶ್ರದ್ದೆ ಮತ್ತು ಭಕ್ತಿಯಿಂದ ಜ್ಞಾನವನ್ನು ಸಂಪಾದಿಸಿ ಉತ್ತಮ ನಡತೆಯಿಂದ ಸಮಾಜದಲ್ಲಿ ಗೌರವವನ್ನು ಗಳಿಸಿ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು ನೆರೆದಿದ್ದ ಭಕ್ತಸಮೂಹಕ್ಕೆ ಆಶೀರ್ವಚನ ನೀಡಿ ಆಶೀರ್ವದಿಸಿದರು,
ವೇದಿಕೆ ಕಾರ್ಯಕ್ರಮದಲ್ಲಿ ನೆಲಮಂಗಲದ ಜನಪ್ರಿಯ ಶಾಸಕ ಶ್ರೀನಿವಾಸ್. ಎನ್ ಮಾತನಾಡಿ ಈ ರೀತಿಯ ಸಾಮಾಜಿಕ ಹಾಗೂ ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವುದು ಬಹಳ ಸಂತಸವಾಗುತ್ತಿರುವುದಾಗಿ ತಿಳಿಸಿ ಮಕ್ಕಳಲ್ಲಿ ಸಂಸ್ಕಾರ ಹಾಗೂ ದೈವೀಕ ಭಾವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಬೆಂಬಲವಿದ್ದು ಮುಂದಿನ ಸದಾ ಇರುವುದಾಗಿ ತಿಳಿಸಿದರು ಈ ಮಧ್ಯೆ ಸಂಘದ ಪ್ರಧಾನ ಕಾರ್ಯದರ್ಶಿಗಳು ಮಾನ್ಯ ಶಾಸಕರನ್ನು ತಾಲ್ಲೂಕಿನಲ್ಲಿ ವೇದಪಾಠ ಶಾಲೆ ಮಾಡಲು ಜಾಗ ಮಂಜೂರು ಮಾಡಿಕೊಡಬೇಕಾಗಿ ವಿನಂತಿಸಿದರು, ಶಾಸಕರು ಈ ಕುರಿತಾಗಿ ಚರ್ಚಿಸಿ ಕೂಡಲೇ ಹತ್ತಿರದಲ್ಲಿ ಎಲ್ಲಿಯಾದರು ಜಾಗ ಮಂಜೂರು ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷ ಮಂಜುನಾಥ ಬಿ.ಕೆ ಮಾತನಾಡಿ ಶ್ರೀ ವೈಷ್ಣವ ಸಂಘ ಟಿ.ಬೇಗೂರು ಪ್ರಾರಂಭವಾಗಿ 8 ವರ್ಷದ ಕಳೆದಿದ್ದು ಈ ವರೆಗೂ ಸುಮಾರು 300 ಕ್ಕೂ ಹೆಚ್ಚು ಶ್ರೀ ವೈಷ್ಣವ ಯುವಕರಿಗೆ ಸಂಘದ ವತಿಯಿಂದ ಉಪನಯನ ಮಾಡಿರುವುದಾಗಿ ತಿಳಿಸಿ ಮುಂದಿನ ದಿನಗಳಲ್ಲಿ ಉಪನಯನದ ಜೊತೆಗೆ ಆಗಮ ವೇದಪಾಠ ಶಾಲೆ ತೆರೆಯುವ ಉದ್ದೇಶವಿದ್ದು ಅದರ ನಿಟ್ಟಿನಲ್ಲಿ ಸಂಘದ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಶ್ರೀಧರ ಮೂರ್ತಿ, ಗೌರವಾಧ್ಯಕ್ಷ ಕೃಷ್ಣಮೂರ್ತಿ ಬಿ.ಕೆ, ಅಧ್ಯಕ್ಷ ಮಂಜುನಾಥ ಬಿ.ಕೆ, ಉಪಾಧ್ಯಕ್ಷ ರಾಜಗೋಪಾಲ್, ಪ್ರಧಾನ ಕಾರ್ಯದರ್ಶಿ ಅಣ್ಣಯ್ಯಸ್ವಾಮಿ, ಖಜಾಂಚಿ ಪ್ರದೀಪ್ ಕುಮಾರ್ ಬಿ.ಎನ್, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್, ಸಹಕಾರ್ಯದರ್ಶಿ ತೇಜಸ್ ಬಿ.ಎಸ್. ಸಂಚಾಲಕ ನವೀನ್ ಕುಮಾರ್ ಸಹ ಸಂಚಾಲಕ ಶಶಿಕುಮಾರ್ ಹಾಗೂ ನಿರ್ದೇಶಕರಾದ ಪುರುಷೋತ್ತಮ್, ಬಿ.ಎಸ್, ಶ್ರೀನಾಥ್ ಬಿ.ಪಿ, ಕೇಶವಮೂರ್ತಿ, ಚಿದಂಬರ, ರಮೇಶ್ ಬಿ.ಆರ್, ಮುರಳಿ, ನರಹರಿ ದೀಕ್ಷಿತ್, ಶ್ರೀಧರ್ ಚನ್ನಹಳ್ಳಿ, ಶಾಂತಕುಮಾರ್, ಬಿ.ಎಂ. ರಾಜಣ್ಣಾಚಾರ್ಯ, ಬಿ.ಪಿ. ಶ್ರೀನಿವಾಸ್, ಮೋಹನ್ ಕುಮಾರ್ (ಹಾಲೇನಹಳ್ಳಿ), ಅನಸೂಯಮ್ಮ, ಪದ್ಮಜಾಕೇಶವಮೂರ್ತಿ ಉಪಸ್ಥಿತರಿದ್ದರು.
- ಕರುನಾಡ ಕಂದ
