ಯಾದಗಿರಿ/ಗುರುಮಠಕಲ್ : ಗಡಿ ಭಾಗದ ರೈತರು ಹಾಗೂ ವರ್ತಕರು ಪ್ರತಿ ಸೋಮವಾರ ನಡೆಯುವ ಪಶುಗಳ ಸಂತೆಗೆ ಸಾಕಷ್ಟು ಸಂಖ್ಯೆಯಲ್ಲಿ ಬರುವುದು ಹಾಗೂ ವ್ಯಾಪಾರ ಮಾಡುವುದು ವಾಡಿಕೆ.
ಇಲ್ಲಿನ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪಶುಗಳನ್ನು ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ನಡೆಯುತ್ತಿದ್ದು, ತೆರಿಗೆ ಪಾವತಿಸದೆ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಎಸ್.ಎಸ್ ತಾಲೂಕ ಅಧ್ಯಕ್ಷರು ಲಾಲಪ್ಪ ತಲಾರಿ ಮಾತನಾಡಿ ಸಂಬಂಧ ಪಟ್ಟವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಕೆಲವರು ದಬ್ಬಾಳಿಕೆ ಮಾಡಿ ತಾವು ಸ್ಥಳೀಯರು ಎಂದು ಹೇಳಿ ಅಸಡ್ಡೆ ತೋರುವವರಿಗೆ ಹೆಡೆಮುರಿ ಕಟ್ಟುವ ಕಾರ್ಯ ಜರುಗಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
