ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅನಧಿಕೃತ ಕೋಚಿಂಗ್ ಸೆಂಟರ್ ಗಳ ವಿರುದ್ದ ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ಶಾಲಾ ಮುಖ್ಯಸ್ಥರಿಂದ ಬೃಹತ್ ಪ್ರತಿಭಟನೆ

ಕಲಬುರಗಿ/ ಜೇವರ್ಗಿ: ಪಟ್ಟಣದಲ್ಲಿ ವಿವಿಧ ಗಲ್ಲಿ ಗಲ್ಲಿಗಳಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಗಳನ್ನು ಪ್ರಾರಂಭಿಸಿದ್ದಾರೆ, ಪೂರ್ವ ಪ್ರಾಥಮಿಕ ಶಾಲೆಯ ಅನುಮತಿ ಪಡೆದು 1ನೇ ತರಗತಿಯಿಂದ 5 ನೇ ಹಾಗೂ 8 ನೇ ತರಗತಿವರೆಗೆ ಮಕ್ಕಳನ್ನು ಪ್ರವೇಶ ಪಡೆಯುತ್ತಿದ್ದಾರೆ, ಯಾವುದೋ ಸ್ಥಳದಲ್ಲಿರುವ ಶಾಲಾ ಅನುಮತಿ ಪಡೆದು ಬೇರೊಂದು ಸ್ಥಳದಲ್ಲಿ ಹಾಗೂ ಸಹಯೋಗದಲ್ಲಿ ನಡೆಸುತ್ತಿರುವುದು ಕಂಡುಬಂದಿದೆ.
ಇನ್ನೂ ತಾಲ್ಲೂಕಿನ ಕೆಲವು ಶಾಲೆಯ ಮುಖ್ಯಸ್ಥರು ಸ್ಟೇಟ್ ಸಿಲೆಬಸ್ ಅನುಮತಿ ಪಡೆದು ಸಿ ಬಿ ಎಸ್ ನಡೆಸುತ್ತಿದ್ದಾರೆ ಇನ್ನೂ ಕೆಲವು ಶಾಲೆಗಳು ಕನ್ನಡ ಮಾಧ್ಯಮ ಅನುಮತಿ ಪಡೆದು ಬೇರೆ ಮಾಧ್ಯಮದಲ್ಲಿ ಬೋಧಿಸುವುದು ಕಂಡು ಬಂದಿದೆ ಇಂತಹ ಇಕ್ಕಟ್ಟಿನಲ್ಲಿ ಸಿಲುಕಿಸಿ ಮುಗ್ದ ಪಾಲಕರನ್ನು ಮೋಸ ಮಾಡಿ ಸಿ.ಬಿ.ಎಸ್.ಸಿ ಬೋಧನೆ ನೀಡುವುದಾಗಿ ಹೇಳಿ ಜೇವರ್ಗಿಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ ಇದರಿಂದ ಮಕ್ಕಳ ಮುಂದಿನ ಭವಿಷ್ಯದ ಜೊತೆಗೆ ಕಣ್ಣಾ ಮುಚ್ಚಾಲೆ ಆಟವಾಡುತ್ತಿದ್ದಾರೆ.
ಪ್ರತಿ ವರ್ಷವೂ ನವೀಕರಣಗೊಳಿಸಿಕೊಂಡ ಇಲಾಖೆಯ ನಿಯಮ ಪಾಲಿಸುತ್ತಿರುವ ಶಾಲೆಗಳಗೆ ತೊಂದರೆಯಾಗುತ್ತಿದೆ, ತಕ್ಷಣವೇ ಇಂತಹ ಕೋಚಿಂಗ್ ಕೇಂದ್ರಗಳು ಹಾಗೂ ಬೋಗಸ್ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲೆಬೇಕು ಈ ಹಿಂದೆ ಅನಧಿಕೃತ ಕೊಚಿಂಗ್, ವಸತಿ, ವಿಭಿನ್ನ ಬೋಧನಾ ಮಾಧ್ಯಮದ ಬಗ್ಗೆ ಗಮನಕ್ಕೆ ತಂದರೂ ಯಾವುದೇ ರೀತಿಯಾಗಿ ಸ್ಪಂಧಿಸದೇ ಇರುವುದು ಮೇಲ್ನೋಟಕ್ಕೆ ನೋಡಿದರೆ ಯಾಕೆ ಅಧಿಕಾರಿಗಳು ಮೌನ ಎಂಬ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ? ಒಂದು ವೇಳೆ ನಿರ್ಲಕ್ಷ್ಯ ತೋರಿದರೆ
ಎಲ್ಲಾ ಮಾನ್ಯತೆ ಪಡೆದ ಶಾಲೆಯ ಮುಖ್ಯಸ್ಥರು ಆಯುಕ್ತರ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು; ಆದ ಕಾರಣ ನಮ್ಮ ಹೋರಾಟ, ನಿಮ್ಮ ಕರ್ತವ್ಯ ನಾಮಕಾಸ್ತ್ರವಾಗುವುದೇ ಕಾರ್ಯ ರೂಪಕ್ಕೆ ತರೋಣ ಹಾಗೂ ತಕ್ಷಣವೇ ಅನಧಿಕೃತವಾಗಿ ಕಾನೂನು ಗಾಳಿಗೆ ತೂರಿ ಕೋಚಿಂಗ್ ನಡೆಸುತ್ತಿರುವವರ ವಿರುದ್ದ ಶಿಸ್ತು, ಕ್ರಮ ಕೈಗೊಳ್ಳಿ ಎಂದು ವಿವಿಧ ಶಾಲೆಯ ಮುಖ್ಯಸ್ಥರು; ತಾಲೂಕು ದಂಢಾಧಿಕಾರಿಗಳಿಗೂ ಹಾಗೂ ಶಿಕ್ಷಣ ಇಲಾಖೆಗೂ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಹೋರಾಟದಲ್ಲಿ ಪಾಲ್ಗೊಂಡ ಪ್ರಮುಖ ಶಾಲೆಗಳೆಂದರೆ
1.ಗುರುಕುಲ ಆಂಗ್ಲ ಮಾಧ್ಯಮ ಶಾಲೆ
2.ನರೇಂದ್ರ ಕನ್ನಡ ಮಾಧ್ಯಮ ಶಾಲೆ
3.ನಿವೇದಿತಾ ಆಂಗ್ಲ ಮಾಧ್ಯಮ ಶಾಲೆ
4 ನೂರಂದೇಶ್ವರ ಪ್ರಾ. ಹಾಗೂ ಪ್ರೌಢ ಶಾಲೆ
5.ಪ್ರಗತಿ ಹಿರಿಯ ಪ್ರಾಥಮಿಕ ಶಾಲೆ
6.ಸೇಂಟ್ ಥಾಮಸ್ ಹಿರಿಯ ಪ್ರಾಥಮಿಕ ಶಾಲೆ
7.ಸೆಂಟ್ ಜಾನ್ ಶಾಲೆ
8.ಎ ಪಿ ಜೆ ಅಬ್ದುಲ್ ಕಲಾಂ ಶಾಲೆ
9.ಮಾತೇಶ್ವರಿ ಶಾಲೆ
10.ಮಾನಸ ಗಂಗೋತ್ರಿ ಶಾಲೆ

  1. ಜ್ಞಾನ ಜ್ಯೋತಿ ಹಿ. ಪ್ರಾಥಮಿಕ ಶಾಲೆ
  2. ಟಿ ಆರ್ ಬಿ ಪ್ರಾಥಮಿಕ ಶಾಲೆ
  3. ರಾಜೀವ್ ಗಾಂಧಿ ಹಿ.ಪ್ರಾ.ಶಾಲೆ
  4. ಜೆ.ಟಿ.ವಿ.ಪಿ ಹಿ ಪ್ರಾ ಶಾಲೆ
  5. ಜನನಿ ವಿದ್ಯಾ ಮಂದಿರ ಶಾಲೆ ಇನ್ನೂ ಹಲವಾರು ಶಾಲೆ ಹಾಗೂ ಎಲ್ಲಾ ಶಿಕ್ಷಕ/ಕಿಯರ ಸಿಬ್ಬಂದಿ ವರ್ಗದರು ಭಾಗವಹಿಸಿದ್ದರು.

ವರದಿ ಚಂದ್ರಶೇಖರ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ