ವಿಜಯಪುರ/ ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ತಮ್ಮ ಜೀವನ ರೂಪಿಸಿಕೊಂಡು ತೃಪ್ತಿಕರವಾಗಿ ಸೇವೆಯಿಂದ ನಿವೃತ್ತರಾಗಿರುವುದು ನಮಗೆ ಹೆಮ್ಮೆ ಇದೆ ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ವ್ಹಿ.ಸಿ.ಹಿರೇಮಠ ಹಾರೈಸಿದರು. ಅವರು ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ವಿರಕ್ತ ಶ್ರೀ ಸಭಾಭವನದಲ್ಲಿ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಾದ ವಾಯ್.ಎಸ್.ನಾದ, ಶ್ರೀಮತಿ ಬಿ.ಟಿ.ಸಜ್ಜನ ಮತ್ತು ಶ್ರೀಮತಿ ಎಮ್.ಆರ್.ಕುಲಕರ್ಣಿ ಅವರಿಗೆ ಶುಭ ಹಾರೈಸಿದರು. ನಿವೃತ್ತ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ಶ್ರೀಮತಿ. ಜೆ.ಎಸ.ಮಸೂತಿಮಠ, ಎಮ್.ವಾಯ್. ಕೇಸರಿ ಮತ್ತು ಎಸ್.ಎಮ್.ಪಾಟೀಲರು ಮಾತನಾಡಿದರು. ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ವೀ.ವಿ.ಸಂಘದ ವೈಸ ಚೇರಮನ್ ಬಿ.ಎನ್.ಹಿಪ್ಪರಗಿ, ಕಾರ್ಯದರ್ಶಿ ಎಮ್.ಎಸ್.ಸರಶೆಟ್ಟಿ, ಸಹ ಕಾರ್ಯದರ್ಶಿ ಕೆ.ಎಸ್.ಮುರಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮೇಶ ಮಂಗೊಂಡ ಸ್ವಾಗತಿಸಿದರು, ಆರ್.ಜಿ.ರಾಠೋಡ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು , ಡಾ.ಅನಿಲಕುಮಾರ ಇರಾಜ ನಿರೂಪಿಸಿದರು.
ವರದಿ :ನಜೀರ್ ಚೋರಗಸ್ತಿ, ತಾಳಿಕೋಟೆ
