
ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ಒಂದು ಮಾಹೆರ್ ವೃದ್ಧ ಅನಾಥ ಆಶ್ರಮ ಇದೆ, ಈ ಆಶ್ರಮದಲ್ಲಿದ್ದ ವೃದ್ಧರನ್ನು ಆರೋಗ್ಯವನ್ನು ವಿಚಾರಿಸಿ ನೀವು ಎಲ್ಲರೂ ಆರೋಗ್ಯವಾಗಿ ಇದ್ದಿದ್ದರೆ, ಮಾತ್ರ ನನ್ನ ಹುಟ್ಟುಹಬ್ಬವನ್ನು ನಿಮ್ಮ ಕೈಯಾರೆ ಆಚರಣೆ ಮಾಡಬೇಕು ಎಂದು ಬಡವರ ಬಂಧು ನಾಗೇಶ್ ತಳಕೇರಿ ಕೇಳಿಕೊಂಡರು.
ಹೌದು ಇವತ್ತು ದಿನಾಂಕ 4/6 /2025 ರಂದು ನನ್ನ ಹುಟ್ಟು ಹಬ್ಬವಿದೆ, ನನ್ನ ಹುಟ್ಟುಹಬ್ಬವನ್ನು ನಿಮ್ಮ ಕೈಯಾರೆ ಆಚರಿಸಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಕೇಳಿಕೊಂಡಾಗ ಅಲ್ಲಿದ್ದ ಎಲ್ಲಾ ವೃದ್ಧರು ಹಾಗೂ ಆಶ್ರಮದ ಸಂಬಂಧಪಟ್ಟ ಅಧಿಕಾರಿಯಾಗಲಿ ಅಲ್ಲಿದ್ದ ಮ್ಯಾನೇಜರ್ ಆಗಲಿ ನಿಮ್ಮ ಆಶಯವನ್ನು ನಾವೇಕೆ ನಿರಾಸೆ ಮಾಡಬೇಕು ನೀವು ಈ ನಮ್ಮ ಆಶ್ರಮದಲ್ಲಿ ಆಚರಣೆ ಮಾಡಿಕೊಳ್ಳಿ ಎಂದು ಒಪ್ಪಿಗೆಯನ್ನು ಕೊಟ್ಟಿದ್ದರು. ಒಪ್ಪಿಗೆಯನ್ನು ಕೊಟ್ಟ ತಕ್ಷಣವೇ ಆ ಬಡವರ ಬಂಧು ವ್ಯಕ್ತಿಗೆ ಆನಂದಬಾಷ್ಪ ಉದ್ಭವಾಯಿತು.
ಆಶ್ರಮದ ಎಲ್ಲರ ಸಮ್ಮುಖದಲ್ಲಿ 43ನೆಯ ಹುಟ್ಟುಹಬ್ಬವನ್ನು ನಾಗೇಶ್ ತಳಕೇರಿ ಮತ್ತು ಸದ್ದಂ ಅರಬ್ ಅವರು ವೃದ್ಧರ ಕೈಯಾರೆ ಕೇಕನ್ನು ಕಟ್ ಮಾಡಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು. ಆಚರಣೆ ಮಾಡಿದ ಎಲ್ಲಾ 43 ಜನ ವೃದ್ದರಿಗೆ ಹೊಸ ಬಟ್ಟೆಯನ್ನು ಕೊಟ್ಟಿದ್ದರು ಅದೇ ರೀತಿಯಾಗಿ ಅಲ್ಲಿದ್ದ ಪುಟ್ಟ ಮಕ್ಕಳಿಗೆ ಒಂದು ವರುಷದ ಪುಸ್ತಕಗಳು ಆಗಲಿ ಪೆನ್ನುಗಳಾಗಲಿ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಂಡರು. ಅದೇ ರೀತಿಯಾಗಿ ನಾಗೇಶ ತಳಕೇರಿ ಯವರ ಅಭಿಮಾನಿಗಳು ಆಗಮಿಸಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು ಅಲ್ಲಿ ಬಂದಂತ ಸುಮಾರು 200 ರಿಂದ 300 ಜನಗಳಿಗೆ ಅನ್ನ ಸಂತರ್ಪಣೆ ಮಾಡಿದರು. ತಮ್ಮ ಕೈಯಾರೆ ಅಲ್ಲಿದ್ದ ಎರಡರಿಂದ ಮೂರು ವೃದ್ಧರಿಗೆ ತಮ್ಮ ಕೈಯಾರೆ ತುತ್ತನ್ನು ಕೊಟ್ಟರು.
ಈ ಒಂದು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಮಸ್ತ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ. ಅರವಿಂದ್ ಕಾಂಬಳೆ
